ವಿಂಡೀಸ್ ವಿರುದ್ಧ ಭಾರತಕ್ಕೆ ಅಮೋಘ ಜಯ
ಕೌಲಾಲಂಪುರ: ಡಿಎಲ್ಎಫ್ ಕಪ್ ತ್ರಿಕೋನ
ಏಕದಿನ ಸರಣಿ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ
ತಂಡ ೧೬ ರನ್ಗಳಿಂದ ಜಯಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ
ತಂಡ ನಿಗದಿತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಗೆ
ಒಳಗಾಗಿತ್ತು. ಆರಂಭಿಕ ಆಟಗಾರ ಸಚಿನ್ ಅವರು ೬೫ ರನ್ ಹಾಗೂ ಹರಭಜನ್
ಸಿಂಗ್ರವರು ೩೭ ರನ್ಗಳನ್ನು ಹೊಡೆದು ಉತ್ತಮ ಆಟ
ಪ್ರದರ್ಶಿಸಿದರು. ೧೬೨ ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಭಾರತ
ಕಳೆದುಕೊಂಡಿತು. ವಿಂಡೀಸ್ ಪರ ಡಿ. ಸ್ಮಿತ್ ೩೧ ರನ್ನಿತ್ತು ೪ ವಿಕೆಟ್ ಪಡೆದು
ಯಶಸ್ವಿ ಬೌಲರ್ ಎನಿಸಿದರು.
ಭಾರತದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್
ತಂಡ ೧೪೬ ರನ್ಗಳಿಗೆ ಆಲೌಟ್ ಆಯಿತು. ವಿಂಡೀಸ್ನ ನಾಯಕ ಲಾರಾ ೪೦
ರನ್ ಹೊಡೆದು ಅಜೇಯರಾಗಿ ಉಳಿದರು. ಭಾರತದ ಪರ ಹರಭಜನ್
ಸಿಂಗ್ ೩೫ ರನ್ನಿತ್ತು ೩ ವಿಕೆಟ್ ಗಳಿಸಿದರು. ಉಳಿದಂತೆ ಶ್ರೀಶಾಂತ್ ಹಾಗು
ಅಗರ್ಕರ್ ತಲಾ ೨ ವಿಕೆಟ್ ಪಡೆದರು. ಸೆಪ್ಟೆಂಬರ್ ೨೨ ರಂದು ನಡೆಯುವ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಜಯಗಳಿಸಿದರೆ ಮಾತ್ರ
ಫೈನಲ್ ಪಂದ್ಯ ಆಡುವ ಅರ್ಹತೆ ಗಳಿಸುತ್ತದೆ. ಉತ್ತಮ ಆಲ್
ರೌಂಡರ್ ಆಟ ಪ್ರದರ್ಶಿಸಿದ ಹರಭಜನ್ `ಪಂದ್ಯ ಶ್ರೇಷ್ಠ' ಪ್ರಶಸ್ತಿ
ಗಳಿಸಿದರು.