|
ತರಂಗನ ಆರ್ಭಟಕ್ಕೆ ತರಗಲೆಗಳಾದ ಬಾಂಗ್ಲಾ
ಮೊಹಾಲಿ: ಉಪುಲ್ ತರಂಗ ಅವರ ಅಮೋಘ ಶತಕದ
ನೆರವಿನಿಂದ ಶ್ರೀಲಂಕಾ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತಾ
ಸುತ್ತಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ೩೭ ರನ್
ಗಳಿಂದ ಜಯ ಗಳಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಪಿಚ್ನ ಪೂರ್ಣ ಲಾಭ
ಪಡೆದು ೩೦೨ ರನ್ ಹೊಡೆದು ಎದುರಾಳಿಗೆ ಕಠಿಣ ಮೊತ್ತವನ್ನು
ನೀಡಿತು. ತಮ್ಮ ೩೦ನೇ ಪಂದ್ಯವನ್ನು ಆಡಿದ ಆರಂಭಿಕ ಆಟಗಾರ
ತರಂಗ ತರಂಗ ೫ನೇ ಶತಕ ಸಿಡಿಸಿದರು. ಮಹರೂಫ್ ಅವರು
ಪಡೆದ ೩ ವಿಕೆಟ್ ನೆರವಿನಿಂದ ಶ್ರೀಲಂಕಾ ತಂಡ ಬಾಂಗ್ಲಾ ದೇಶವನ್ನು
೨೬೫ ರನ್ ಗಳಿಗೆ ನಿಯಂತ್ರಿಸಿತು. ಬಾಂಗ್ಲಾ ಪರ ಸಕಿಬುಲ್ ಹಸನ್ ೫೯
ರನ್ ಹೊಡೆದು ಅಜೇಯರಾಗಿ ಉಳಿದರು.
ಇಂದಿನ ಪಂದ್ಯದಲ್ಲಿ ದೈತ್ಯ ವಿಂಡೀಸ್ ಪಡೆಯ ವಿರುದ್ಧ ಜಿಂಬಾಬ್ವೆ
ತಂಡ ಸೆಣೆಸುತ್ತಿದೆ. ಇತ್ತೀಚಿನ ವರದಿ ಪ್ರಕಾರ ಜಿಂಬಾಬ್ವೆ ತಂಡ ೮೫
ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ನಿರಾಸದಾಯಕ
ಪ್ರದರ್ಶನ ನೀಡಿದೆ.
ಇನ್ನಷ್ಟು
ಸುವರ್ಣ ಕರ್ನಾಟಕಕ್ಕಾಗಿ ಹೊಸ ಅಂಚೆ ಚೀಟಿ
ಪೈರಸಿ ತಡೆಯಲು ಗುಂಡಾ ಕಾಯ್ದೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ
ಮಂಗಳೂರಿನಲ್ಲಿ ಗಲಭೆ: ೨ ಬಲಿ
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
|