ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಚಾಂಪಿಯನ್ಸ್ ಟ್ರೋಫಿಗೆ ಆಯ್ದ ತಂಡದಿಂದ ಸೌರವ್
ಗಂಗೂಲಿ, ಶ್ರೀಶಾಂತ್, ಕುಂಬ್ಳೆ ಹೊರಕ್ಕೆ,
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ
ಆಯ್ದ ತಂಡದಿಂದ ಸೌರವ್ ಗಂಗೂಲಿಯನ್ನು ಹೊರಹಾಕಲಾಗಿದೆ.
ಭಾರತ ಕ್ರಿಕೆಟ್ ಮಂಡಳಿಯ ಈ ನಿರ್ಣಯದೊಂದಿಗೆ
ಗಂಗೂಲಿಯ ಕ್ರಿಕೆಟ್ ಜೀವನ ಮುಗಿದಂತಾಗಿದೆ. ಚಾಂಪಿಯನ್ಸ್
ಟ್ರೋಫಿಯ ಸಂಭವನೀಯ ಆಟಗಾರರ ಶಿಬಿರದಲ್ಲಿ ಪಾಲ್ಗೊಂಡಿದ್ದ
ಗಂಗೂಲಿ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ.
ಗಂಗೂಲಿ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ
ನಾಯಕನಾಗಿದ್ದರು. ತರಬೇತುದಾರ ಗ್ರೆಗ್ ಚಾಪೆಲ್ ಹಾಗೂ ಕ್ರಿಕೆಟ್
ಮಂಡಳಿಯ ಮಾಜಿ ಅಧ್ಯಕ್ಷ ಜಗಮೋಹನ ದಾಲ್ಮಿಯಾ ಜೊತೆಗಿನ ವಿರಸವು
ಗಂಗೂಲಿ ಕ್ರಿಕೆಟ್ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು.
ಒಂದು ದಿನದ ಅಂತರರಾಷ್ಟ್ರೀಯ
ಪಂದ್ಯಗಳಲ್ಲಿ ಶೇ೪೦.೬೫ ಸರಾಸರಿಯಲ್ಲಿ ೧೦, ೧೨೩ ರನ್ಗಳನ್ನು
ಸೌರವ್ ಗಳಿಸಿದ್ದಾರೆ.
ಇನ್ನಷ್ಟು
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್ಬಿಯಿಂದ ಆನೇಕಲ್ ಬಳಿ ಸೂರ್ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು
ದುಡ್ಡು ಉಳಿಸಲು ಇಂಟೆಲ್ ಕಂಪೆನಿ ಸಿಬ್ಬಂದಿ ಕಡಿತ
ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ
ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ