ಜಾನ್ರೈಟ್ ಮಾತನ್ನು ಒಪ್ಪದ ಸೆಹ್ವಾಗ್
ಬೆಂಗಳೂರು:
ಪ್ರಾದೇಶಿಕವಾಗಿ ತಂಡದ ಆಯ್ಕೆಯಲ್ಲಿ ವ್ಯತ್ಯಯವಾಗಿತ್ತು ಎಂಬ
ತರಬೇತುದಾರ ಜಾನ್
ರೈಟ್ ಮಾತನ್ನು ಒಪ್ಪದ ವಿರೇಂದರ್ ಸೆಹ್ವಾಗ್ ಪ್ರತಿಭಾವಂತರನ್ನು ತುಂಬಾ ದಿನ ಮುಚ್ಚಿಡಲು
ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ
ತರಬೇತಿ ಶಿಬಿರದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸೆಹ್ವಾಗ್ ಆಯ್ಕೆ ಸಮಿತಿಯ
ಎಲ್ಲಾ ಐದು ಜನರ ಒಪ್ಪಿಗೆ ನಂತರವೇ ಆಟಗಾರನ ಆಯ್ಕೆ ಯಾಗುತ್ತದೆ ಎಂದರು.
ತೆಂಡೂಲ್ಕರ್
ತಂಡಕ್ಕೆ ಮರಳಿರುವುದು ಸಂತಸ ತಂದಿದೆ. ತೆಂಡೂಲ್ಕರ್ ಜೊತೆ ಆರಂಭಿಕ ಆಟಗಾರನಾಗಿ
ಆಡುವುದು ಖುಷಿಕೊಡುತ್ತದೆ. ಆದರೆ ಅಂತಿಮವಾಗಿ ತಂಡದ ಗೆಲುವು ಮುಖ್ಯ ಎಂದು ಸೆಹ್ವಾಗ್
ಅಭಿಪ್ರಾಯಪಟ್ಟರು.