|
ಮಾಹಿತಿ ಕೊರತೆಯಿಂದ ಕಂಗಾಲಾದ ಪ್ರವಾಸಿಗರು
ಲೇಖನ ಹಾಗೂ ಚಿತ್ರಗಳು - ಮಲೆನಾಡಿಗ
malenadiga@gmail.com
ಶಿವಮೊಗ್ಗ: `ಹಲ್ಲಿದ್ದಾಗ ಕಡಲೆ ಇಲ್ಲ. ಕಡಲೆ ಇದ್ದಾಗ
ಹಲ್ಲಿಲ್ಲ' ಎನ್ನುವಂತೆ ಬಸ್ಸ್ಟ್ಯಾಂಡ್, ರೈಲ್ವೆ ನಿಲ್ದಾಣಗಳಲ್ಲಿ ವಾಹನ
ವ್ಯವಸ್ಥೆ ಇದ್ದರೂ ಮಾಹಿತಿಯ ಕೊರತೆಯಿಂದ ಹೇಗೆ, ಎಲ್ಲಿ
ಹೋಗಬೇಕು ಎನ್ನುವ ಗೊಂದಲ ಪ್ರವಾಸಿಗರಲ್ಲಿ ಏರ್ಪಟ್ಟಿತ್ತು. ನಿತ್ಯ
ಕರ್ಮಗಳಿಗೂ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಎಲ್ಲೂ ಮಾಹಿತಿ
ಕೇಂದ್ರವೇ ಇರಲಿಲ್ಲ.
ಮಾಹಿತಿ ಗೊಂದಲವಲ್ಲದೆ ಸಮ್ಮೇಳನದಲ್ಲಿ ಅಂಗಡಿ
ವಿತರಣೆಯಲ್ಲಿಯೂ ಗೊಂದಲ ಮೂಡಿತ್ತು. ಬೆಂಗಳೂರಿನ ಕನ್ನಡ
ಸಾಹಿತ್ಯ ಪರಿಷತ್ತಿನ ಮೂಲಕ ಮುಂಗಡ ಹಣ ನೀಡಿ ಅಂಗಡಿಗೆ ಸ್ಥಳ
ಕಾದಿರಿಸಿದವರಿಗೆ ನೀಡಲಾದ ಸ್ಥಳವನ್ನೂ ಹಿಂದಿನ ದಿನ ಬಂದ
ಅಂಗಡಿಕಾರರಿಗೆ ಹಂಚಿಯಾಗಿತ್ತು! ಇದರಿಂದ ನೂಕುನುಗ್ಗಾಟ
ನಡೆಯಿತು.

ಆದಿ ಚುಂಚನಗಿರಿ ಮಠದವರು ಉತ್ತಮವಾದ ಭೋಜನವನ್ನೆನೋ
ಸಿದ್ಧಪಡಿಸಿದ್ದರು. ಆದರೆ ಊಟದ ಕೌಂಟರ್ನಲ್ಲಿಯ ಗೊಂದಲದಿಂದ ಊಟ
ಎಲ್ಲರಿಗೂ ನೀಡುತ್ತಾರೋ ಇಲ್ಲವೋ ಎನ್ನುವ ಸಂಶಯ ಬಂದ ಅತಿಥಿಗಳಿಗೆ
ಕಾಡಿತು.
ಹೀಗೆ ಸರಿಯಾದ ಯೋಜನೆ ಇಲ್ಲದೆ ಸಾಹಿತ್ಯ ಸಮ್ಮೇಳನಕ್ಕೆ ಬಂದ
ಅತಿಥಿಗಳು ಪರದಾಡುವಂತಾಯಿತು.
ಇನ್ನಷ್ಟು
ಓದುಗರಿಗಾಗಿ
ಸಮ್ಮೇಳನದ ಚಿತ್ರಗಳು
ಉದ್ಘಾಟನೆಗೊಂಡ
೭೩ನೇ ಸಾಹಿತ್ಯ ಸಮ್ಮೇಳನ
ಪ್ರೊ.ಚಂದ್ರಶೇಖರ ಪಾಟೀಲ್
ಕನ್ನಡ ಸಾಹಿತ್ಯ ಪರಿಷತ್ನ ಧ್ವಜಾರೋಹಣ
ಮಾಡಿದರು. ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
|