ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನಿತ್ಯೋತ್ಸವ ಕವಿ
ಬೆಂಗಳೂರು:
ಶಿವಮೊಗ್ಗದಲ್ಲಿ ನಡೆಯಲಿರುವ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ
ಹಿರಿಯ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷ ಚಂದ್ರಶೇಖರ ಪಾಟೀಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ
ಈ ನಿರ್ಣಯ ಕೈಗೊಳ್ಳಲಾಗಿದೆ.
ನವೋದಯ ಸಾಹಿತ್ಯದಲ್ಲಿ
ಹೆಸರು ಮಾಡಿರುವ ನಿಸಾರ್ ಅಹಮದ್ ನಿತ್ಯೋತ್ಸವ ಕವಿಯೆಂದು ಖ್ಯಾತರಾಗಿದ್ದಾರೆ. ಭೂಗರ್ಭಶಾಸ್ತ್ರದ
ಪ್ರಾಧ್ಯಾಪಕರಾಗಿರುವ ನಿಸಾರ್ ಸಂಜೆ ಐದರ ಮಳೆ, ಮನಸ್ಸು ಗಾಂಧಿ ಬಜಾರು, ನೆನೆದವರ
ಮನದಲ್ಲಿ, ಸ್ವಯಂ ಸೇವೆಯ ಗಿಳಿಗಳು ಮುಂತಾದ ಕೃತಿಗಳನ್ನು ಬರೆದು ಜನಮನ್ನಣೆ
ಗಳಿಸಿದ್ದಾರೆ.
ಮತ್ತಷ್ಟು :
ಸಮ್ಮೇಳನಾಧ್ಯಕ್ಷರಾಗಿ
ಆಯ್ಕೆಯಾದ ನಿಸಾರ್ ಅನಿಸಿಕೆ