|
ಆಟೊಗ್ರಾಫ್ ಪ್ಲೀಸ್
ಪಾಟೀಲ ಪುಟ್ಟಪ್ಪನವರ ಬಳಿ ಹಸ್ತಾಕ್ಷರಕ್ಕಾಗಿ ನುಡಿಸಿರಿಯ
ಸಾಹಿತ್ಯಾಸಕ್ತರು
ವರದಿ : ಶ್ರೀನಿಧಿ.ಡಿ.ಎಸ್
ನುಡಿಸಿರಿಯಲ್ಲಿ ಹಸ್ತಾಕ್ಷರಗಳಿಗೆ ಭಾರಿ ಬೇಡಿಕೆ ನೋಡಿ! ಎಲ್ಲಿ
ಹೋದರೂ ಸಾಹಿತಿಗಳ ಬಳಿ ಹಸ್ತಾಕ್ಷರಕ್ಕಾಗಿ ಬೇಡಿಕೊಳ್ಳುವ
ಸಾಹಿತ್ಯಾಭಿಮಾನಿಗಳು. ಅದರಲ್ಲೂ ದೂರದೂರಿನಿಂದ ಬಂದ ವಿದ್ಯಾರ್ಥಿಗಳು
ಈ ಕೆಲಸದಲ್ಲಿ ಮುಂಚೂಣಿಯಲ್ಲಿ! ಸಮ್ಮೇಳನದ ಹಿಮ್ಮಾಹಿತಿ ಗೋಷ್ಠಿ
ನಡೆಯುತ್ತಿತ್ತು, ಒಂದಿಷ್ಟು ಜನ ಹುಡುಗ ಹುಡುಗೀರು ಧೈರ್ಯ
ಮಾಡೇ ಬಿಟ್ಟರು ನೋಡಿ! ಎದುರುಗಡೆ ಸಾಲಿನಲ್ಲೇ ಕುಳಿತ್ತಿದ್ದ ಪಾಟೀಲ್
ಪುಟ್ತಪ್ಪನವರ ಬಳಿಗೇ ತೆರಳಿ ಆಟೋಗ್ರಾಫ್ ಕೇಳಿದರು. ಪುಟ್ಟಪ್ಪ
ಅವರನ್ನ ನಿರಾಸೆ ಮಾಡಲಿಲ್ಲ, ನಗುಮೊಗದಿಂದಲೇ ಹಸ್ತಾಕ್ಷರ ಹಾಕಿ,
ಕಳಿಸಿಕೊಟ್ಟರು! (ಮಕ್ಕಳೆಲ್ಲ ನೆಲದ ಮೇಲೇ ಕೂತು ಸಹಿ
ಕೇಳಿದ್ದರು, ಗೋಷ್ಠಿಗೇನೂ ತೊಂದರೆ ಆಗಲಿಲ್ಲ ಬಿಡಿ!)
ಮೋಹನ ಆಳ್ವರು ಮಧ್ಯಾಹ್ನ ಊಟಮಾಡಲೆಂದು ನೇತ್ರಾವತಿ ಹಾಸ್ಟೆಲ್
ಕಡೆಗೆ ಬಂದಿದ್ದರು. ಪಾಪ, ಅವರಿಗೆ ಊಟ ಮಾಡಲೆಲ್ಲಾಯಿತು?!!
ದೂರದೂರುಗಳಿಂದ ಬಂದಿದ್ದ ಸಾಹಿತ್ಯಾಸಕ್ತರು ಹಸ್ತಾಕ್ಷರಕ್ಕೆ,
ಫೋಟೊಗಳಿಗೆ ಅವರ ಮೇಲೆ ಮುಗಿಬಿದ್ದರು. ಎಳ್ಳಷ್ಟೂ ಬೇಸರಿಸದ
ಆಳ್ವರು ನಗುನಗುತ್ತಲೇ ಎಲ್ಲಾ ಫೋಟೊಗ್ರಾಫರುಗಳಿಗೆ ಪೋಸು
ಕೊಟ್ಟು, ಸಹಿ ಹಾಕಿ ಮೆಲ್ಲನೆ ಅಲ್ಲಿಂದ ಬೇರೆಡೆಗೆ ತೆರಳಿದರು!
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|