Fonts Problem?

Downloads

? Wallpapers

? Vikrantakarnataka Weekly

ಪತ್ರಿಕೆ ಬಿಡುಗಡೆ

DU8? 17 g?z? ????i? ?q?U??/span> ?*????s?/a>

Tuesday, 31 October 2006 02:27 AM

ಸಂತಸದ ಕ್ಷಣಗಳಲ್ಲಿ ನಿಸಾರ್‌ಅಹ್ಮದ್ ಮಾತು

ಹಿಂದೆ ಶಿವಮೊಗ್ಗದಲ್ಲೇ ಏಳೆಂಟು ವರ್ಷಗಳ ಕಾಲ ವಾಸವಾಗಿದ್ದ ನಿಸಾರ್ ಅಹ್ಮದ್ ಈಗ ಅಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ವಿಕ್ರಾಂತ ಕರ್ನಾಟಕದೊಂದಿಗೆ ಅವರು ತಮ್ಮ ಸಂತಸ ಹಂಚಿಕೊಂಡದ್ದು ಹೀಗೆ :

  • ಶಿವಮೊಗ್ಗದ ಪರಿಸರ ನನ್ನ ಅಧ್ಯಯನಕ್ಕೆ ಪೂರಕವಾಗಿತ್ತು. ಹಾಗೆ ನೋಡಿದರೆ ನನ್ನ ಉತ್ತಮ ಕೃತಿಗಳು, ನಿತ್ಯೋತ್ಸವ ಪದ್ಯವನ್ನೂ ಅಲ್ಲೇ ಬರೆದೆ.

  • ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದಕ್ಕೆ ತುಂಬ ಖುಷಿಯಾಯಿತು.

  • ಅದರಲ್ಲೂ ಸುವರ್ಣ ಕರ್ನಾಟಕ ವರ್ಷದಲ್ಲಿ ನಾನು ಅಧ್ಯಕ್ಷನಾಗಿರುವುದು ನನ್ನ ಅದೃಷ್ಟ.

  • ೯೦ ವರ್ಷದ ಇತಿಹಾಸದಲ್ಲಿ ಅಲ್ಪಸಂಖ್ಯಾತನೊಬ್ಬ ಅಧ್ಯಕ್ಷನಾಗುತ್ತಿರುವುದು ಇದೇ ಮೊದಲು

  • ಅಧ್ಯಕ್ಷ ಭಾಷಣದಲ್ಲಿ ಹಲವಾರು ವಿಚಾರಗಳನ್ನು ಮಂಡಿಸಬೇಕೆಂಬ ಉದ್ದೇಶವಿದೆ. ಅದರಲ್ಲಿ ಮುಖ್ಯವಾದುದು ಗಡಿ ಸಮಸ್ಯೆ. ಮಹಾಜನ್ ವರದಿಯನ್ನು ಒಪ್ಪದೇ ಇದ್ದಲ್ಲಿ ಪ್ರತಿಭಟನೆಗೆ ಕರೆ. ಅಗತ್ಯ ಬಿದ್ದರೆ ಗೋಕಾಕ್ ಮಾದರಿ ಚಳವಳಿಗೂ ಸಿದ್ಧ.

  • ಕನ್ನಡದ ಮುಲಭೂತ ಸಮಸ್ಯೆಗಳ ಕುರಿತು ಮಾತನಾಡುತ್ತೇನೆ.

  • ಕನ್ನಡಕ್ಕೆ ಈಗ ಕಾಡುತ್ತಿರುವ ತಬ್ಬಲಿತನ ಮತ್ತು ಭಾಷಾ ಸಮಸ್ಯೆ ನನ್ನನ್ನು ಕಾಡುತ್ತಿದೆ. ಆ ಬಗ್ಗೆ ಉಲ್ಲೇಖಿಸುವ ಯೋಜನೆ ಇದೆ.

ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಯಾಗಿಲ್ಲ. ಅದಲ್ಲದೆ ಕನ್ನಡಿಗರಲ್ಲಿ ತಮ್ಮತನದ ಕುರಿತು ಅಭಿಮಾನ ಬೆಳೆಸುವ ನಿಟ್ಟಿನಲ್ಲಿ ಭಾಷಣ.

Print This PagePrint this page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com