ಸುಂದರ ಮೈಸೂರಿಗೆ ಶೋಭೆಯ ದಸರಾ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಪ್ರಸಿದ್ಧ ಪ್ರವಾಸಿ ತಾಣವಾದ ಮೈಸೂರು
ನಗರವೀಗ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಮಿನುಗುತ್ತಿದೆ.
ಧಾರ್ಮಿಕ ಕಂಪನ್ನು ಬೀರುವ, ಭಾವೈಕ್ಯತೆಯ ಸೇತುವೆಯನ್ನು
ನಿರ್ಮಿಸುವ, ಸಾಂಸ್ಕೃತಿಕ ಸಮ್ಮಿಲನವನ್ನು ಏರ್ಪಡಿಸುವ ಮೈಸೂರು
ದಸರಾ ಮಹೋತ್ಸವ ಆರಂಭವಾಗಿದೆ. ಮೈಸೂರಿನ ಪತ್ರಿಕೋದ್ಯಮ
ವಿದ್ಯಾರ್ಥಿ ಶ್ರೀನಿಧಿ ಓಡಿಲ್ನಾಳ ಸಂಪೂರ್ಣ ೧೦ ದಿನಗಳ ಸಂಭ್ರಮವನ್ನು ಸೆರೆಹಿಡಿದು
ನಮ್ಮ ವಿಕ್ರಾಂತ ಕರ್ನಾಟಕಕ್ಕೆ ಕಳುಹಿಸಲಿದ್ದಾರೆ. ವರ್ಣ ರಂಜಿತವಾಗಿ
ದಸರಾವನ್ನು ವಿಕ್ರಾಂತ ಬಳಗದೊಡನೆ ಆಚರಿಸಿ.