ಇದು ಹಕ್ಕಿ ಅಲ್ಲ ಆದ್ರೂ ಹಾರತೈತಲ್ಲ...
ಶ್ರೀನಿಧಿ
ಓಡಿಲ್ನಾಳ
haninidhi@yahoo.com
ಮೈಸೂರು: ದಸರಾ ಅಂಗವಾಗಿ ಮೈಸೂರಿನ
ದೊಡ್ಡಕೆರೆ ಮೈದಾನದಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿತ್ತು.
ವಿವಿಧ ಗಾತ್ರದ ಬಣ್ಣದ ಗಾಳಿಪಟಗಳು ಬಾನಾಡಿಗಳಂತೆ ಹಾರಾಡಿ ಜನರ ಮನರಂಜಿಸಿದವು.
ಬೆಂಗಳೂರು, ಮಡಿಕೇರಿ, ಮೈಸೂರು, ಮಂಡ್ಯ ಮುಂತಾದ
ಕಡೆಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಜಾನಪದ ಲೋಕದ
ಅಧ್ಯಕ್ಷರಾದ ಜಿ. ನಾರಾಯಣ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತ
`ಗಾಳಿಪಟಕ್ಕೆ ಸುಮಾರು ೧೦೦೦ ವರ್ಷದ ಇತಿಹಾಸವಿದೆ' ಎಂದು
ಹೇಳಿದರು.
ಮಹಿಷಾಸುರಮರ್ಧಿನಿಯ ಚಿತ್ರವುಳ್ಳ ೧೨ ಅಡಿ
ಅಗಲ ಮತ್ತು ಉದ್ದದ ಗಾಳಿಪಟ ಕೇಂದ್ರಬಿಂದುವಾಗಿತ್ತು.
ನಗರಕ್ಕೆ ಮುಖ್ಯಮಂತ್ರಿ:
ಉತ್ಸವದಲ್ಲಿ ಭಾಗವಹಿಸಲು ಮುಖ್ಯಮಂತ್ರಿ
ಕುಮಾರಸ್ವಾಮಿ ರವಿವಾರ ಸಂಜೆ ೪.೩೦ ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಜಂಬೂ
ಸವಾರಿ, ಪಂಜಿನ ಕವಾಯಿತುಗಳ ಸಂದರ್ಭದಲ್ಲಿ ಉಪಸ್ಥಿತರಿದ್ದು ಅ.
೩ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.
ನೇರ ಪ್ರಸಾರ: ದೂರದರ್ಶನವು ಜಂಬೂಸವಾರಿಯ ನೇರ ಪ್ರಸಾರ ಮಾಡಲಿದೆ. ನೇರ
ಪ್ರಸಾರ ಮಾಡಲು ದೂರದರ್ಶನ ಸಿಬ್ಬಂದಿಗೆ ಅಗತ್ಯ
ಅನುಕೂಲಗಳನ್ನು ಮಾಡಿಕೊಡಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.
ಇನ್ನಷ್ಟು
ಮೈಸೂರು
ದಸರಾದ ದಿನಾಂಕ ೨೮ ರ ವಿಶೇಷತೆಗಳು
ದಸರಾಕ್ಕೆ ವಿಶೇಷ ಬಸ್ ವ್ಯವಸ್ಥೆ
ಜಂಬೂ
ಸವಾರಿ ವೀಕ್ಷಣೆಗೆ ಸುವ್ಯವಸ್ಥೆ
ದಸರಾ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ
ಚಿಣ್ಣರ ದಸರಾ ಮಹೋತ್ಸವ ಉದ್ಘಾಟನೆ
ಮಳೆಯೊಂದಿಗೆ ಯುವ ದಸರಾ ಜುಗಲ್ಬಂದಿ
ದಸರಾ ಪ್ರಚಾರದಲ್ಲಿ ತೊಡಗಿರುವ ಇಲಾಖೆ
ದಸರಾದಲ್ಲಿ ಮೊದಲಬಾರಿಗೆ ಹಾಸ್ಯದ ಹೊನಲು
ರಂಗು
ರಂಗಾಗಿ ಆರಂಭಗೊಂಡ ಮೈಸೂರು ದಸರಾ
`ಗೋಲ್ಡ್
ಕಾರ್ಡ್' ಉಳ್ಳವರಿಗೆ ಸುವರ್ಣ ವೈಭವ
ನವರಾತ್ರಿ-
ತಳುಕು ಶ್ರೀನಿವಾಸ್ರವರಿಂದ ಲೇಖನ
ಸುಂದರ ಮೈಸೂರಿಗೆ ಶೋಭೆಯ ದಸರಾ