ಚಿಣ್ಣರ ದಸರಾ ಮಹೋತ್ಸವ ಉದ್ಘಾಟನೆ
ಶ್ರೀನಿಧಿ
ಓಡಿಲ್ನಾಳ
haninidhi@yahoo.com
ಚಿಣ್ಣರ ದಸರಾ ಮಹೋತ್ಸವವನ್ನು ಬಾಲನಟ ಮಾಸ್ಟರ್
ಕಿಶನ್ ಉದ್ಘಾಟಿಸಿದರು. ಇಲ್ಲಿನ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ
ಮಾತನಾಡಿದ ಮಾಸ್ಟರ್ ಕಿಶನ್ `ತಂದೆ-ತಾಯಿಗಳು ತಮ್ಮ
ಮಕ್ಕಳನ್ನು ಪ್ರೀತಿ ಅಕ್ಕರೆಯಿಂದ ಬೆಳೆಸಬೇಕು. ಅವರ ಬೌದ್ಧಿಕ
ಬೆಳವಣಿಗೆಗೆ ಪೂರಕವಾಗುವ ಸೂಕ್ತ ಪರಿಸರ ಕಲ್ಪಿಸಿದರೆ ಎಂತಹ
ಸಾಧನೆಯನ್ನಾದರೂ ಮಾಡಬಹುದು' ಎಂದು ಹೇಳಿದ್ದಾರೆ. ಈ
ಕಾರ್ಯಕ್ರಮದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಸೆಲ್ವಕುಮಾರ್
ಉಪಸ್ಥಿತರಿದ್ದರು.
ದಸರಾ ಕ್ರೀಡಾಕೂಟಕ್ಕೆ
ವಿದ್ಯುಕ್ತ ಚಾಲನೆ
ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ
ದಸರಾ ಕ್ರೀಡಾ ಕೂಟವನ್ನು ಅರ್ಜುನ ಪ್ರಶಸ್ತಿ ವಿಜೇತ ಅಶ್ವಿನಿ ನಾಚಪ್ಪ
ಅವರು ಉದ್ಘಾಟಿಸಿದರು.
ಒಲಂಪಿಕ್ ಮಾದರಿಯಲ್ಲಿಯೇ ದಸರಾ
ಕ್ರೀಡಾಕೂಟ ನಡೆಯುತ್ತಿರುವುದು ಸಂತಸದ ವಿಷಯ. ಗ್ರಾಮೀಣ
ಪ್ರತಿಭೆಗಳಿಗೆ ಈ ಕ್ರೀಡಾಕೂಟ ಉತ್ತಮ ವೇದಿಕೆ ಎಂದು ಅಶ್ವಿನಿ ನಾಚಪ್ಪ
ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸದ ಶಿವಣ್ಣ, ಜಿಲ್ಲಾಧಿಕಾರಿ
ಸೆಲ್ವಕುಮಾರ್, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಮೈಸೂರು
ನಗರಪಾಲಿಕೆ ಆಯುಕ್ತ ಡಾ.ಚಂದ್ರಶೇಖರ್ ಹಾಗೂ ಕ್ರೀಡಾಕೂಟ ಸಮಿತಿಯವರು
ಉಪಸ್ಥಿತರಿದ್ದರು.
ಇನ್ನಷ್ಟು
ಮಳೆಯೊಂದಿಗೆ ಯುವ ದಸರಾ ಜುಗಲ್ಬಂದಿ
ದಸರಾ ಪ್ರಚಾರದಲ್ಲಿ ತೊಡಗಿರುವ ಇಲಾಖೆ
ದಸರಾದಲ್ಲಿ ಮೊದಲಬಾರಿಗೆ ಹಾಸ್ಯದ ಹೊನಲು
ರಂಗು
ರಂಗಾಗಿ ಆರಂಭಗೊಂಡ ಮೈಸೂರು ದಸರಾ
`ಗೋಲ್ಡ್
ಕಾರ್ಡ್' ಉಳ್ಳವರಿಗೆ ಸುವರ್ಣ ವೈಭವ
ನವರಾತ್ರಿ-
ತಳುಕು ಶ್ರೀನಿವಾಸ್ರವರಿಂದ ಲೇಖನ
ಸುಂದರ ಮೈಸೂರಿಗೆ ಶೋಭೆಯ ದಸರಾ