|
ಸಮಸ್ತ ಓದುಗರಿಗೆ ಹೊಸವರ್ಷದ
ಶುಭಾಶಯಗಳು
೨೦೦೬ ಇನ್ನು ಗತಕಾಲ. ೨೦೦೭ರ ಆಗಮನಕ್ಕೆ ಎಲ್ಲರೂ ಕಾತರದಿಂದ
ಎದುರು ನೋಡುತ್ತಿರುವ ಈ ಸುಸಂದರ್ಭದಲ್ಲಿ ವಿಕ್ರಾಂತ ಕರ್ನಾಟಕ
ಬಳಗ ತನ್ನ ಸಮಸ್ತ ಓದುಗರಿಗೆ ಹೊಸವರ್ಷದ ಶುಭಾಶಯ
ಕೋರುತ್ತದೆ.

ಹಳೆಯ ವರ್ಷದ ಮುಸುಕು ಸರಿಸಿ,
ಮನದ ತುಂಬ ಆಸೆ ಇರಿಸಿ,
ಮನದುಂಬಿ ನವ ವರ್ಷ ಸ್ವಾಗತಿಸೋಣ.
ಹೊಸ ಉಲ್ಲಾಸ, ಹೊಸ ನೋಟ
ಮರೆತು ಎಲ್ಲ ಸಂಕಟ,
ಸುಂದರ ಬದುಕ ಮತ್ತೆ ಕಟ್ಟೋಣ.
ಈ ತನಕ ತಮ್ಮ ಅಮೂಲ್ಯ ಸಲಹೆ, ಸೂಚನೆ ಮತ್ತು
ಪ್ರೋತ್ಸಾಹಗಳನ್ನು ನಮಗೆ ನೀಡಿದ್ದೀರಿ. ತಪ್ಪಿದಾಗ ಪ್ರೀತಿಯಿಂದ
ಗದರಿದ್ದೀರಿ. ನಮ್ಮ ಉತ್ತಮ ಪ್ರಯತ್ನಗಳಿಗೆ ಬೆನ್ನು ತಟ್ಟಿ
ಸ್ನೇಹಿತರಂತೆ ಬೆಂಬಲಿಸಿದ್ದೀರಿ. ಕಥೆ, ಕವನ, ವಿಡಂಬನೆ, ಪ್ರಬಂಧ,
ಅಭಿಪ್ರಾಯ ಹೀಗೆ ಯಾವುದೇ ನಿಮ್ಮ ಬರವಣಿಗೆ ನಮಗೆ ಅಮೂಲ್ಯ.
ಮುಂಬರುವ ದಿನಗಳಲ್ಲಿ ನಿಮ್ಮ ಇನ್ನೂ ಹೆಚ್ಚಿನ
ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತೇವೆ.
 |