Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಹೃಶಿಕೇಶದಲ್ಲಿ ಗಂಗೆ

ಹರಿದಳು, ನೊರೆ ಮೊರೆದು, ಝರಿ ಇಳಿದು,

ಹಾರಿ ಬಿದ್ದು ಬಂದವಳು;

ಪ್ರಶಾಂತ ಸಮಸ್ಥರದಲ್ಲಿ ಸ್ಥಾಯಿಯಂತೆ,

ಧಾವಂತವಿಲ್ಲದವಳು.

 

ಕಳೆದ ಏರು-ಪೇರುಗಳ ನೆನಪಿಲ್ಲದೆ,

ಇಹದ ಚಿಂತೆಯಿಲ್ಲದವಳು;

ಮುಂದಿನ ಹೊಲಸು-ನೋವುಗಳ ಅರಿವಿಲ್ಲದೆ,

ಪರದ ಗೊಂದಲವಿಲ್ಲದವಳು.

 

ಪಟಿಕ-ಶುದ್ಧ ಉದ್ಬುದ್ಧಳಾಗಿ ಬಂದು-

ಪವಿತ್ರ ನೀರೆಯಾದವಳು;

ಪಾಪ-ಪುಣ್ಯಗಳಾಚೆಯೆಲ್ಲವ ತೊಳೆದು-

ಪಾವಿತ್ರ್ಯದ ಪ್ರತೀಕವಾದವಳು.

 

ರಾಮ-ಲಕ್ಷ್ಮಣರ ಹೆಸರ ಹಿಡಿದ-

ತೂಗುಯ್ಯಾಲೆ ತೂಗುವವಳು,

ಗುಹನ ಪುಟ್ಟ ತೆಪ್ಪ ತೇಲಿಸಿ ದಾಟಿಸಿ,

ನಿರೀಕ್ಷೆಗಳ ಮೀರಿದವಳು.

 

ಹಚ್ಚಿ ಬಿಟ್ಟ ಪುಟ್ಟ ಪುಟ್ಟ ಹಣತೆಗಳಲಿ-

ಭರವಸೆಗಳ ಬೆಳಗುವವಳು;

ಹಾದಿಯುದ್ದ ಹರಿದುಹೋದ ಸೆರಗಂಚಲಿ-

ವಿಶ್ವಾಸದ ಸೆಲೆ ಹರಿಸುವವಳು.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com