ಹರಿದಳು, ನೊರೆ ಮೊರೆದು, ಝರಿ ಇಳಿದು,
ಹಾರಿ
ಬಿದ್ದು ಬಂದವಳು;
ಪ್ರಶಾಂತ
ಸಮಸ್ಥರದಲ್ಲಿ ಸ್ಥಾಯಿಯಂತೆ,
ಧಾವಂತವಿಲ್ಲದವಳು.
ಕಳೆದ ಏರು-ಪೇರುಗಳ ನೆನಪಿಲ್ಲದೆ,
ಇಹದ ಚಿಂತೆಯಿಲ್ಲದವಳು;
ಮುಂದಿನ
ಹೊಲಸು-ನೋವುಗಳ ಅರಿವಿಲ್ಲದೆ,
ಪರದ
ಗೊಂದಲವಿಲ್ಲದವಳು.
ಪಟಿಕ-ಶುದ್ಧ
ಉದ್ಬುದ್ಧಳಾಗಿ ಬಂದು-
ಪವಿತ್ರ
ನೀರೆಯಾದವಳು;
ಪಾಪ-ಪುಣ್ಯಗಳಾಚೆಯೆಲ್ಲವ
ತೊಳೆದು-
ಪಾವಿತ್ರ್ಯದ
ಪ್ರತೀಕವಾದವಳು.
ರಾಮ-ಲಕ್ಷ್ಮಣರ ಹೆಸರ ಹಿಡಿದ-
ತೂಗುಯ್ಯಾಲೆ ತೂಗುವವಳು,
ಗುಹನ ಪುಟ್ಟ ತೆಪ್ಪ ತೇಲಿಸಿ ದಾಟಿಸಿ,
ನಿರೀಕ್ಷೆಗಳ ಮೀರಿದವಳು.
ಹಚ್ಚಿ
ಬಿಟ್ಟ ಪುಟ್ಟ ಪುಟ್ಟ ಹಣತೆಗಳಲಿ-
ಭರವಸೆಗಳ ಬೆಳಗುವವಳು;
ಹಾದಿಯುದ್ದ
ಹರಿದುಹೋದ ಸೆರಗಂಚಲಿ-
ವಿಶ್ವಾಸದ
ಸೆಲೆ ಹರಿಸುವವಳು.