|
ವಿದೇಶದಲ್ಲೂ ವಿಜೃಂಭಿಸುವ ಕನ್ನಡದ ದೀಪ
ಹೊರ ದೇಶಕ್ಕೆ ಹೋದರೂ ಭಾರತೀಯ ಸಂಪ್ರದಾಯಗಳನ್ನು
ಉಳಿಸಿಕೊಂಡು, ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿರುವ
ಹೆಮ್ಮೆಯು ಉತ್ತರ ಕ್ಯಾಲಿಪೋರ್ನಿಯಾ ಕನ್ನಡಿಗರಿಗೆ ಸೇರಬೇಕು.
ಇದಕ್ಕೆ ನಿದರ್ಶನವಾಗಿ ಇತ್ತೀಚೆಗೆ ಉತ್ತರ ಕ್ಯಾಲಿಪೋರ್ನಿಯಾ ಕನ್ನಡ
ಸಂಘವು ಗಣೇಶೋತ್ಸವವನ್ನು ಆಚರಿಸಿತು. ಈಗ ಬೆಳಕಿನ ಹಬ್ಬ
ದೀಪಾವಳಿಯ ಸಂಭ್ರಮ. ದೀಪಾವಳಿ ಎಂದರೆ ಕೇವಲ ಬರೀ
ಪಟಾಕಿಗಳನ್ನು ಹೊಡೆದು ಸಂತಸಪಡುವುದಷ್ಟೇ ಅಲ್ಲದೇ ಈ
ಬಾರಿಯ ದೀಪಾವಳಿಯಲ್ಲಿ ನೃತ್ಯ, ನಾಟಕ, ವೃಂದಗಾನ,
ಭೂತಾರಾದನೆ, ಹಾಡು, ಕುಣಿತ ಹೀಗೆ ಮಕ್ಕಳಿಂದ ಹಿಡಿದು ಮನೆ
ಮಂದಿಯೆಲ್ಲ ಮನರಂಜಿಸಬಲ್ಲ ಕಾರ್ಯಕ್ರಮಗಳನ್ನು
ಹಮ್ಮಿಕೊಂಡಿದೆ.
ಕಾರ್ಯಕ್ರಮಗಳ ವಿವರ
ಮಿಲನ : ಮಧ್ಯಾಹ್ನ ೩:೩೦ ರಿಂದ ೪:೦೦ ಗಂಟೆಯವರೆಗೆ
ಪ್ರಾರ್ಥನೆ
ತರಕಾರಿ ಹಾಡು
: ಮಕ್ಕಳ ನೃತ್ಯ (ನಿರ್ದೇಶನ - ಸವಿತಾ ಚಂದ್ರ
ಶೇಖರ್)
ಉಪಾಯದಿಂದ ಅಪಾಯ ಪರಿಹಾರ : ಮಕ್ಕಳ ನೃತ್ಯ ನಾಟಕ
(ನಿರ್ದೇಶನ - ಉಮಾ ಕಳಸಾಪುರ)
ಯುವ ರಾಗ :
ಕಿರಿಯರ ವೈವಿಧ್ಯಮಯ ಸಂಗೀತ
ಕಾರ್ಯಕ್ರಮ (ನಿರ್ದೇಶನ - ಬದರಿ ಪ್ರಸಾದ್)
ಗುಂಜನ :
ಕನ್ನಡ ಕಲಿ ವಿದ್ಯಾರ್ಥಿಗಳಿಂದ ವೃಂದಗಾನ
ಭೂತದ ಕೋಲ : ತುಳುನಾಡಿನ ವಿಶಿಷ್ಟ ಧಾರ್ಮಿಕ ಆಚರಣೆಯ
ಭೂತಾರಾದನೆ (ರಚನೆ ಮತ್ತು (ನಿರ್ದೇಶನ - ರಘುರಾಮ್ ಶೆಟ್ಟಿ)
ಕನ್ನಡ ಋಷಿಗಳೇ ತಲೆಬಾಗಿ ನಮಿಪೆ : ಕನ್ನಡ ಮಹಾಕವಿಗಳ
ಗೀತೆಗಳನ್ನಾಧರಿಸಿದ ಕಾರ್ಯಕ್ರಮ (ನಿರ್ವಹಣೆ - ಕುಸುಮಾ
(ಅರಕಲಗೂಡು)
ಬೇಂದ್ರೆ ನಮನ :
ವರಕವಿ ಬೇಂದ್ರೆಯವರ ಪುಣ್ಯಸ್ಮರಣೆಗಾಗಿ
ಹಾಡು - ಕುಣಿತದ ಸಂಭ್ರಮ (ನಿರ್ದೇಶನ - ಮೂಡಲಮನೆ
ಖ್ಯಾತಿಯ ವಿಜಯಾ ಎಕ್ಕುಂಡಿ; ಸಂಗೀತ: ಸಚಿಕೇತ ಶರ್ಮ ಮತ್ತು
ವೃಂದ)
ಸ್ಥಳ : ಸನ್ನಿವೇಲ್ ದೇವಾಲಯದ ಸಭಾಂಗಣ,
೪೫೦, ಪರ್ಶಿಯನ್
ಡ್ರೈವ್,
ಸನ್ನಿವೇಲ್,
ಕ್ಯಾಲಿಪೋರ್ನಿಯಾ ೯೪೫೪೫.
ದಿನಾಂಕ : ೧೮ ನವೆಂಬರ್ ೨೦೦೬ ಸಂಜೆ ೪ ಗಂಟೆಗೆ
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|