ಅಯ್ಯಪ್ಪ ದರ್ಶನಕ್ಕಾಗಿ ಮಹಿಳೆಯರು ಕೋರ್ಟ್ಗೆ
ನವದೆಹಲಿ :
೧೦ರಿಂದ ೫೦ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿ
ದೇವಾಲಯ ಪ್ರವೇಶಿಸಲು ಇರುವ ನಿಷೇಧವನ್ನು ತೆಗೆದು ಹಾಕಬೇಕೆಂದು ಮಹಿಳಾ ನ್ಯಾಯವಾದಿಗಳು
ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ನ್ಯಾಯವಾದಿ ರವಿಪ್ರಕಾಶ್
ಗುಪ್ತ ಅವರ ಮೂಲಕ ಭಾರತೀಯ ಯುವ ನ್ಯಾಯವಾದಿಗಳ ಒಕ್ಕೂಟದ ಆರು ಮಹಿಳಾ
ಸದಸ್ಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಮಹಿಳಾ ಸದಸ್ಯರು ದೇವಾಲಯ
ಪ್ರವೇಶಿಸುವುದನ್ನು ನಿಷೇಧಿಸುವ ಮೂಲಕ ಸಂವಿಧಾನದ ೧೪ನೇ ವಿಧಿಯನ್ನು
ಉಲ್ಲಂಘಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕೇರಳ ಸರ್ಕಾರ
ತಿರುವಾಂಕೂರ್ ದೇವಸ್ವಂ ಮಂಡಳಿ ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕರು ಮತ್ತು
ಪಟನಂತಿಟ್ಟ ಜಿಲ್ಲಾಧಿಕಾರಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.