ಮುಖ್ಯಮಂತ್ರಿಯ ಮೇಲೆ ಡಿಕೆಶಿಯ ಹೊಸ ಆರೋಪ
ಬೆಂಗಳೂರು :
ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾದ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯ
ಜನಾರ್ಧನ ರೆಡ್ಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಅವರ ಕುಟುಂಬದ ಸದಸ್ಯರು
ಗಣಿಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಇನ್ನೂ
ಹಸಿಯಾಗಿರುವಾಗಲೇ, ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿಸಚಿವ
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಹೋದರ ಡಾ||
ಎಚ್.ಡಿ.ರಮೇಶ್ ಅವರ ಮೇಲೆ ೪೦ ಕೋಟಿಗೂ ಹೆಚ್ಚು ಬೆಲೆಬಾಳುವ ಕಬ್ಬಿಣದ ಅದಿರನ್ನು
ಅಕ್ರಮವಾಗಿ ಹೊರದೇಶಗಳಿಗೆ ಸಾಗಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಪ್ರದೇಶ
ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ
ಅವರು, ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಂಪೂರ್ಣವಾಗಿ ಸಿಬಿಐಗೆ ಒಪ್ಪಿಸಿ ತನಿಖೆ ಮಾಡಿಸಬೇಕೆಂದು
ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಯವರೇ
ಸದನದ ಒಳಗಡೆಯೇ ತಾವಾಗಲೀ ಅಥವಾ ತಮ್ಮ ಕುಟುಂಬದ ಸದಸ್ಯರಾಗಲೀ
ಯಾವುದೇ ರೀತಿಯಲ್ಲೂ ಕೂಡ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವುದಿಲ್ಲ ಎಂಬಂತಹ
ಹೇಳಿಕೆ ನೀಡಿರುವ ಹಿನ್ನೆಲೆಯಲ್ಲೇ ಮಾಜಿಸಚಿವ ಡಿ.ಕೆ.ಶಿವಕುಮಾರ್ ಅವರು
ಬಿಡುಗಡೆಗೊಳಿಸಿರುವ ಕಬ್ಬಿಣದ ಅದಿರನ್ನು ಡಾ|| ಎಚ್.ಡಿ. ರಮೇಶ್ ಅವರ ನೇತೃತ್ವದ ಬಿಎಸ್ಕೆ
ಟ್ರೇಡಿಂಗ್ ಇಂಕ್ ಸಂಸ್ಥೆಯ ದಾಖಲೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
`ಬಿಎಸ್ಕೆ ಟ್ರೇಡಿಂಗ್
ಇಂಕ್