|
ಲಷ್ಕರ್ ಜೊತೆ ಸಂಬಂಧ :ಜವಾನರು, ಪೊಲೀಸರ
ಸೆರೆ
ಶ್ರೀನಗರ
: ೧೭ ವರ್ಷದ
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಸೇನೆಯ ಇಬ್ಬರು ಜವಾನರು ಮತ್ತು ಇಬ್ಬರು ಪೊಲೀಸರನ್ನು
ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯಿಬಾ ಉಗ್ರರ ಜೊತೆ ಸಂಭವನೀಯ
ಸಂಬಂಧ ಹೊಂದಿದ್ದಾರೆಂಬ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಬಂಧಿಸಿದೆ.
ಲ್ಯಾನ್ಸ್ ನಾಯಕ್ ಮಹಮ್ಮದ್
ಶಕೀಲ್ ಮತ್ತು ಅಬ್ದುಲ್ ಹಕ್ ಬಂಧಿತ ಜವಾನರಾದರೆ, ಸಿಕಂದರ್ ಮತ್ತು ಕಬೀರ್
ಎಂಬುವರು ಬಂಧಿತ ಪೊಲೀಸರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಲಷ್ಕರ್-ಇ-ತೊಯಿಬಾ
ಜೊತೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಭಯೋತ್ಪಾದಕರಿಗೆ
ಹೇಗೆ ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. |