ಹೆಲ್ಮೆಟ್ ಕಡ್ಡಾಯ : ದಿನಾಂಕ ನಿಗದಿ ವಿಳಂಬ
ಮೈಸೂರು : ದ್ವಿಚಕ್ರ
ವಾಹನ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು
ಕಡ್ಡಾಯಗೊಳಿಸುವ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ರಾಜ್ಯ ಗೃಹಸಚಿವ
ಎಂ.ಪಿ.ಪ್ರಕಾಶ್ ತಿಳಿಸಿದ್ದಾರೆ.
`ಹೆಲ್ಮೆಟ್
ಧರಿಸುವುದರ ಬಗ್ಗೆ ಜನರಿಂದ ಸರ್ಕಾರ ಇನ್ನೂ ಅಹವಾಲುಗಳನ್ನು ಸ್ವೀಕರಿಸುತ್ತಿರುವ
ಹಿನ್ನೆಲೆಯಲ್ಲಿ ಇನ್ನೂ ಅಂತಿಮ ದಿನಾಂಕವನ್ನು ಘೋಷಿಸಲಾಗಿಲ್ಲ' ಎಂದು ಪ್ರಕಾಶ್ ಸ್ಪಷ್ಟಪಡಿಸಿದರು.
ರಾಜ್ಯ ಉಚ್ಛನ್ಯಾಯಾಲಯದ
ಆದೇಶದ ಮೇರೆಗೆ ಹಾಗೂ ನಿಮ್ಹಾನ್ಸ್ ಆಸ್ಪತ್ರೆ ನೀಡಿದ್ದ ವರದಿಯನ್ನಾಧರಿಸಿ ದ್ವಿಚಕ್ರ ವಾಹನ
ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತಿದೆ
ಎಂದು ಅವರು ತಿಳಿಸಿದರು.
ಹಿಂಬದಿ ಸವಾರರಿಗೆ ಹೆಲ್ಮೆಟ್
ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರ ವಿರೋಧ ದಿನದಿಂದ ದಿನೇ ಹೆಚ್ಚಾಗಿದ್ದು,
ಅವರ ವಾದದಲ್ಲೂ ತರ್ಕವಿದೆ ಎಂದು ಸರ್ಕಾರಕ್ಕೂ ಅನ್ನಿಸಿದೆ, ಎಂದು ಅವರು ಹೇಳಿದರು.
ಆದರೆ ಮುಂಬದಿ ಸವಾರರಿಗಾದರೂ
ಹೆಲ್ಮೆಟ್ ಧರಿಸುವುದು ಕೆಲವೆಡೆಗಳಲ್ಲಿ ಕಡ್ಡಾಯಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರದ ಆದೇಶದಿಂದ ಕಾಳಸಂತೆಯವರ ಕಾಟವನ್ನು ತಪ್ಪಿಸಲು ರಾಜ್ಯಸರ್ಕಾರ ಸೂಕ್ತ
ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.