ಬಿಎಂಐಸಿ: ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್
ಜಾತ್ಯತೀತ
ಜನತಾದಳ ಶಾಸಕರಾಗಿರುವ ಕೆ.ಎನ್.ರಾಜಣ್ಣ ಅವರು ಸದನದಲ್ಲಿ ನ್ಯಾಯಾಧೀಶರ ವಿರುದ್ಧ
ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ
ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕನಿಷ್ಠ ಕೆಲವು ಯೋಜನೆ ಮತ್ತು
ನ್ಯಾಯಗಳನ್ನಾದರೂ ರಾಜಕೀಯದಿಂದ ದೂರವಿಡಿ ಎಂದು ಕಟುವಾಗಿ ಹೇಳಿತು.
ಬಿಎಂಐಸಿ ಯೋಜನೆಗೆ ಸಂಬಂಧಿಸಿ
ನಡೆಯುತ್ತಿರುವ ಎಲ್ಲಾ ವಿವಾದಗಳೂ ದುರುದ್ದೇಶದಿಂದ ಕೂಡಿದ್ದಾಗಿದೆ. ಯೋಜನೆಯನ್ನು
ಭಗ್ನಗೊಳಿಸುವುದೇ ಸರಕಾರದ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ಅಭಿಪ್ರಾಯ ಪಟ್ಟರು.
ಇದರೊಂದಿಗೆ ನೈಸ್ ವಿರುದ್ಧ
ನ್ಯಾಯಾಂಗ ಸಮರಕ್ಕೆ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಹಿನ್ನಡೆಯುಂಟಾದಂತಾಗಿದೆ.