|
ಸಿಎಂ ಲಂಚ
ತಗೊಂಡಿದ್ದಾರೆ ರೆಡ್ಡಿ ಪುನರುಚ್ಚಾರ
ಕುಮಾರಸ್ವಾಮಿ
ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ಬೆಂಗಳೂರು :
೧೫೦ ಕೋಟಿ ರೂಪಾಯಿ ಲಂಚ ಹಗರಣದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ
ಗೃಹಸಚಿವ ಎಂ.ಪಿ. ಪ್ರಕಾಶ್ ಭಾಗಿಯಾಗಿದ್ದಾರೆ ಎಂದು ಬಿಜೆಪಿಯ ಜನಾರ್ಧನ ರೆಡ್ಡಿ ಮತ್ತೊಮ್ಮೆ
ಆರೋಪ ಮಾಡಿದ್ದಾರೆ.
ಬುಧವಾರ ವಿಧಾನ ಸಭೆಯ
ಶೂನ್ಯವೇಳೆಯಲ್ಲಿ ಸ್ವಯಂಪ್ರೇರಿತರಾಗಿ ಮಾತನಾಡಿದ ಜನಾರ್ಧನ ರೆಡ್ಡಿ ಮುಖ್ಯಮಂತ್ರಿ
ಹಾಗೂ ಅವರ ಕುಟುಂಬದ ಸದಸ್ಯರು ಮಾತ್ರವಲ್ಲದೆ ಗೃಹಸಚಿವರೂ ಕೂಡ ಈ ಲಂಚಹಗರಣದಲ್ಲಿ
ಭಾಗಿಯಾಗಿರುವುದಾಗಿ ಹೇಳಿದರು. ಜೊತೆಗೆ ತಾವು ಈ ವಿಷಯವನ್ನು
ಬಹಿರಂಗಗೊಳಿಸಿರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ಕೊಡಬೇಕು ಎಂದು ವಿನಂತಿ ಮಾಡಿಕೊಂಡರು.
ಸಿಎಂ ರಾಜೀನಾಮೆಗೆ
ಕಾಂಗ್ರೆಸ್ ಪಟ್ಟು
ಜನಾರ್ಧನ
ರೆಡ್ಡಿಯವರ ಹೇಳಿಕೆಯನ್ನು ಆಧರಿಸಿಕೊಂಡು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸರಕಾರದ
ವಿರುದ್ಧ ತನ್ನ ಟೀಕೆಯನ್ನು ಶುರುಮಾಡಿದೆ. ರೆಡ್ಡಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ
ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ನ
ಎಚ್. ಕೆ. ಪಾಟೀಲ್ ಆಗ್ರಹಿಸಿದ್ದಾರೆ. ಅಲ್ಲದೆ ಭ್ರಷ್ಟಾಚಾರವನ್ನು ಬೆಂಬಲಿಸುವ ಪಕ್ಷಕ್ಕೆ ಬಿಜೆಪಿಯೂ
ಬೆಂಬಲ ನೀಡಬಾರದು. ಇದು ನೈತಿಕವಾಗಿ ಸಮ್ಮತವಾದ ಸರಕಾರ ಅಲ್ಲ ಎಂದು ಅವರು
ಹೇಳಿದ್ದಾರೆ. |