ಕಾವೇರಿ ಜಲಾನಯನ
ಪ್ರದೇಶದಲ್ಲಿ ಮಳೆ
ಮಡಿಕೇರಿ:
ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ
ಭರ್ತಿಯಾಗಿದೆ. ಮಡಿಕೇರಿ-ನಾಪೋಕ್ಲು ನಡುವಿನ ರಸ್ತೆಯಲ್ಲಿ ನಾಲ್ಕು ಅಡಿ ನೀರು ನಿಂತಿದ್ದು
ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಡಿಕೇರಿಯ ವಿವಿಧ
ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ ನಗರದಲ್ಲಿ
ವಿಪರೀತ ಮಳೆ ಸುರಿಯುತ್ತಿರುವುದರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ.
ಕಾವೇರಿ ಅಚ್ಚುಕಟ್ಟು
ಪ್ರದೇಶದ ಕೃಷ್ಣರಾಜ ಸಾಗರ, ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗಿವೆ.