ಕಳಪೆ ಸೌಲಭ್ಯ ಎಲ್ಲಕ್ಕೂ ಕಾರಣ: ಅಚ್ಯುತರಾವ್
ಬೆಂಗಳೂರು:
ಟ್ರಾಫಿಕ್ ಒತ್ತಡವನ್ನು ಕಮ್ಮಿ ಮಾಡಲು ನಾಗರೀಕರ ಸಹಾಯ ಅತ್ಯಗತ್ಯ ಎಂದು ನಗರ
ಪೋಲಿಸ್ ಆಯುಕ್ತ ಎನ್. ಅಚ್ಯುತ ರಾವ್ ಹೇಳಿದ್ದಾರೆ.
ನಗರದ ಬಿಆರ್ವಿ ಮೈದಾನದಲ್ಲಿ
ಪರೇಡ್ನಲ್ಲಿ ಭಾಗವಹಿಸಿದ್ದ ಆಯುಕ್ತರು ಟ್ರಾಫಿಕ್ ವಾರ್ಡನ್ಗಳಿಗೆ ನೀಡುವ
ಅತ್ಯುತ್ತಮ ಪುರಸ್ಕಾರವನ್ನು ಸ್ಯಾಮುಯಲ್ ಹೆನ್ರಿ ಮತ್ತು ಹರಿ ಬಾಬು ಅವರಿಗೆ
ಜೊತೆಗೆ ಉತ್ತಮ ಆರಕ್ಷರ ಪ್ರಶಸ್ತಿಯನ್ನು ಎಂ .ಎ. ಘೋಷ್, ಮುರಳೀಧರ್ ಸಿ. ಎ,
ಸುಬ್ರಹ್ಮಣ್ಯ, ನಟರಾಜ್ ಮತ್ತು ಸುರೇಂದ್ರರಿಗೆ ನೀಡಿದರು.
ಪೇದೆ ಮರಿಯಪ್ಪ(ಏರ್ಪೋರ್ಟ್
ರಸ್ತೆ), ಅಶೋಕ್(ಹೈ ಗ್ರೌಂಡ್ಸ್), ಶಂಕರ್(ಆಡುಗೋಡಿ), ಸಂಗೈನಾಥನ್ (ಬ್ಯಾಟರಾಯನಪುರ),
ಸಿದ್ಧಪ್ಪ(ಮಲ್ಲೇಶ್ವರ), ಅಪ್ಪಜ್ಜಪ್ಪ(ಜಯನಗರ) ಇವರುಗಳಿಗೆ ಉತ್ತಮ ಟ್ರಾಫಿಕ್ ಪೋಲಿಸ್
ಪ್ರಶಸ್ತಿಯನ್ನು ನೀಡಿದರು.