ಭಾರತ-ಪಾಕಿಸ್ತಾನ ಶಾಂತಿ
ಮಾತುಕತೆ ರದ್ದು
ಬಾಂಬ್ಸ್ಫೋಟದ ಹಿಂದೆ
ಪಾಕ್ ಕೈವಾಡ
ನವದೆಹಲಿ: ಮುಂಬಯಿಯಲ್ಲಿ
ನಡೆದ ಸರಣಿ ಬಾಂಬ್ಸ್ಫೋಟದಲ್ಲಿ ಪಾಕಿಸ್ಥಾನದ ಕೈವಾಡವಿರುವುದು ಮನವರಿಕೆಯಾಗಿದ್ದು,
ಜುಲೈ ೨೧ರಂದು ನಡೆಯಬೇಕಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ
ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಪಡಿಸಲಾಗಿದೆ.
ಜುಲೈ ೧೧ರಂದು ನಡೆದ
ಬಾಂಬ್ಸ್ಫೋಟದಲ್ಲಿ ೨೨೯ ಮಂದಿ ಸಾವನ್ನಪ್ಪಿದ್ದು, ೭೭೦ ಮಂದಿ ಗಂಭೀರವಾಗಿ
ಗಾಯಗೊಂಡಿದ್ದರು. ಆದರೆ ಈ ಕೃತ್ಯದಲ್ಲಿ ತನ್ನದೇನೂ ಪಾತ್ರವಿಲ್ಲಎಂದು ಪಾಕಿಸ್ತಾನ ಸತತವಾಗಿ
ಹೇಳುತ್ತಲೇ ಬಂದಿದ್ದು, ಈ ಕುರಿತ ತನಿಖೆಗೆ ತಾನೂ ಸಹಕರಿಸುವುದಾಗಿ ಪಾಕ್ ಭರವಸೆಯನ್ನೂ
ನೀಡಿತ್ತು.
ಆದರೆ ಮುಂಬಯಿಗೆ ಭೇಟಿ
ನೀಡಿದ ಪ್ರಧಾನಿ ಮನಮೋಹನ್ಸಿಂಗ್ ಈ ಕುಕೃತ್ಯದಲ್ಲಿ ಪಾಕಿಸ್ತಾನದ ಕೈವಾಡವಿರುವುದನ್ನು
ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ತನ್ನ ಗಡಿಪ್ರದೇಶದಲ್ಲಿ ಭಯೋತ್ಪಾದನೆ ನಡೆಸುವುದನ್ನು
ನಿಲ್ಲಿಸದೇ ಇದ್ದಲ್ಲಿ ಶಾಂತಿ ಮಾತುಕತೆಗಳನ್ನು ಮುಂದುವರೆಸುವುದು ಸಾಧ್ಯವಿಲ್ಲ. ಈ
ವಿಷಯವನ್ನು ಪಾಕ್ಗೆ ಸಾಕಷ್ಟು ಬಾರಿ ತಿಳಿಸಿದ್ದೇವೆ ಎಂದಿದ್ದಾರೆ.