ಇದಾದ ನಂತರ ಬಿಜೆಪಿ
ರಾಜ್ಯದ ಮುಖಂಡರು ರೆಡ್ಡಿಯವರ ಮೇಲೆ ವಿವಿಧ ರೀತಿಯ ಒತ್ತಡ ತಂತ್ರಗಳನ್ನು ಹೇರಿ
ಅವರ ಹೇಳಿಕೆಯನ್ನು ಹಿಂಪಡೆಯುವಂತೆ ಹೇಳಿದ್ದರೂ ಸಹ ಅವರ ಮಾತಿಗೆ ರೆಡ್ಡಿ
ಕವಡೆ ಕಿಮ್ಮತ್ತೂ ನೀಡಿರಲಿಲ್ಲ.
ಆದರೆ, ಶುಕ್ರವಾರ
ರೆಡ್ಡಿ ಕರೆದ ಮಾಧ್ಯಮಗೋಷ್ಠಿಗೆ ಮುನ್ನ ದೆಹಲಿಯ ಕೆಲವು ಹಿರಿಯ ನಾಯಕರ ಮೂಲಕ
ಒತ್ತಡವನ್ನು ಹೇರಿಸಿ, ರೆಡ್ಡಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆದೇಶ
ಕೊಡಿಸಲಾಯಿತು. ಈ ಮೂಲಕ ರೆಡ್ಡಿ ಹಾಕಿದ್ದ ಲಂಚದ ಬಾಂಬನ್ನು ಹುಸಿಗೊಳಿಸುವಲ್ಲಿ ಬಿಜೆಪಿ ನಾಯಕರು
ಸದ್ಯದ ಮಟ್ಟಿಗೆ ಸಫಲರಾಗಿದ್ದಾರೆ.
ಧರಂ ಸಿಂಗ್ ಆಕ್ಷೇಪ
: ಗಣಿಗಾರಿಕೆ ಕುರಿತಂತೆ ಜನಾರ್ದನ ರೆಡ್ಡಿ ಹೇಳಿಕೆ ಬದಲಾಯಿಸಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ
ಧರಂಸಿಂಗ್ ತಮ್ಮ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಗರಣದ ಬಗ್ಗೆ ಸದನದಲ್ಲಿ
ಚರ್ಚೆಗಳು ನಡೆದಿದ್ದು, ರೆಡ್ಡಿ ಸದನದ ಕಾಲಹರಣಕ್ಕೆ ಕಾರಣರಾಗಿದ್ದಾರೆ. ಈ ಕುರಿತು ಮುಖ್ಯಮಂತಿ
ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಬೇಕು ಎಂದು ಧರಂಸಿಂಗ್ ಶನಿವಾರ
ಒತ್ತಾಯಿಸಿದ್ದಾರೆ.