ವಿ.ಶ್ರೀನಿವಾಸ್ ಪ್ರಸಾದ್
ಅವರ ಆಪ್ತರು ಹಾಗೂ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರುತ್ತಿರುವ
ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಇಬ್ಬರೂ ಸಚಿವರ
ರಾಜಕೀಯ ನಿರ್ಧಾರದ ನಡುವಿನ ಸಂಬಂಧವನ್ನು ತಳ್ಳಿಹಾಕಿರುವ ವಿ.ಶ್ರೀನಿವಾಸ್ ಪ್ರಸಾದ್
ಅವರು (ಸಿದ್ದರಾಮಯ್ಯ) ಪಕ್ಷ ಸೇರಿದ್ದಕ್ಕೂ, ನಾನು ಸೇರುವುದಕ್ಕೂ ಯಾವುದೇ
ಸಂಬಂಧವಿಲ್ಲವೆಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಒಂದು ವರ್ಷದ ಹಿಂದಷ್ಟೇ
ಜೆ.ಡಿ.ಎಸ್ ತೊರೆದಿರುವ ಶ್ರೀನಿವಾಸ್ ಪ್ರಸಾದ್ ಯಾವುದೇ ಪಕ್ಷ ಸೇರದೆ ರಾಜಕೀಯದಲ್ಲಿ
ತಟಸ್ಥ ನೀತಿಯನ್ನು ಅನುಸರಿಸುತ್ತಾ ಬಂದಿದ್ದರು.
ಸಿದ್ದರಾಮಯ್ಯ
ಅವರು ಪಕ್ಷ ಸೇರುತ್ತಿದ್ದಂತೆಯೇ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ
ಅವರನ್ನು ಭೇಟಿ ಮಾಡುವುದಾಗಿ ಪ್ರಸಾದ್ ತಿಳಿಸಿದ್ದಾರೆ.