ಬಡವರಿಗೆ ಕಡಿಮೆ
ದರದಲ್ಲಿ ಮನೆ-ನಿವೇಶನ
ಬಡವರಿಗೆ ಸ್ವಾತಂತ್ರೋತ್ಸವದ
ಗಿಫ್ಟ್
ಬೆಂಗಳೂರು:
ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಡು ಬಡವರಿಗೆ
ಕಡಿಮೆ ದರದಲ್ಲಿ ಮನೆ-ನಿವೇಶನ ಒದಗಿಸುವ ವಸತಿ ಯೋಜನೆಯನ್ನು ಸ್ವಾತಂತ್ರ್ಯ
ದಿನದಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಲಿದ್ದಾರೆ.
ಈ ಯೋಜನೆಯಲ್ಲಿ
ಬೆಂಗಳೂರಿನ ಬಡತನ ರೇಖೆಗಿಂತ ಕೆಳಗಿರುವ ಕಡು ಬಡವರಿಗೆ ೫೦ ಸಾವಿರ ನಿವೇಶನ ಹಾಗೂ
ಒಂದು ಲಕ್ಷ ಫ್ಲಾಟ್ ಮಾದರಿಯ ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ
ನಿರ್ಧರಿಸಿದೆ.
ಬಿ.ಡಿ.ಎ,
ಗೃಹಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿ, ಬೆಂಗಳೂರು ಮಹಾನಗರ ಪಾಲಿಕೆ ಸಂಯುಕ್ತ
ಆಶ್ರಯದಲ್ಲಿ ಈ ಯೋಜನೆಯನ್ನು ಆರಂಭಿಸಲಾಗುವುದು.
ಆಟೋ ಚಾಲಕರು,
ಕಡಿಮೆ ಆದಾಯದ ಉದ್ಯೋಗಸ್ಥರಿಗೆ ಸ್ವಂತ ಮನೆ ನೀಡುವ ಉದ್ದೇಶವಿಟ್ಟುಕೊಂಡು
ರೂಪಿಸಲಾದ ಈ ಯೋಜನೆ ಕೇವಲ ಬೆಂಗಳೂರಿಗೆ ಸೀಮಿತವಾಗಿರದೆ ರಾಜ್ಯದ ಎಲ್ಲಾ
ಜಿಲ್ಲಾ-ತಾಲ್ಲೂಕು ಕೇಂದ್ರಗಳಿಗೂ ಅನ್ವಯವಾಗಲಿದೆ.