|
ಮುಖ್ಯಮಂತ್ರಿ
ದಂಪತಿಗಳಿಂದ ಚಂಡಿಯಾಗ
ಶಿವಮೊಗ್ಗ : ಕಾಂಗ್ರೆಸ್ ಸದಸ್ಯರು ರಾಜ್ಯದ ಸಮ್ಮಿಶ್ರ
ಸರ್ಕಾರವನ್ನು ಉರುಳಿಸಲು ಆರೋಪಗಳ ಸುರಿಮಳೆಗೈಯುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ
ಎಚ್.ಡಿ.ಕುಮಾರ ಸ್ವಾಮಿ ದಂಪತಿಗಳು ಸರ್ಕಾರದ ಸುಭದ್ರತೆ ಹಾಗೂ ಸಂಕಷ್ಟ ನಿವಾರಣೆಗಾಗಿ
ಶತಚಂಡಿ ಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಶ್ರೀ ಅಭಯಂ ಲಕ್ಷ್ಮೀನರಸಿಂಹಸ್ವಾಮಿ
ದೇವಸ್ಥಾನದಲ್ಲಿ ನಡೆಯುತ್ತಿರುವ ಶತಚಂಡಿ ಯಾಗದ ಪೂರ್ಣಾಹುತಿ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಅವರ ಪತ್ನಿ
ಗುರುವಾರ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಿಕೆಯರಿಗೆ ಬಾಗಿನ ನೀಡಿದ ಮುಖ್ಯಮಂತ್ರಿ
ದಂಪತಿಗಳು ಸಮೀಪದ ಶ್ರೀ ಗಣಪತಿ ದೇವಸ್ಥಾನಕ್ಕೂ ಭೇಟಿ ನೀಡಿದರು. ಇತ್ತೀಚೆಗೆ ಹಾಸನ
ಜಿಲ್ಲೆಯ ತಮ್ಮ ಕುಲದೇವರಿಗೆ ಕುಮಾರಸ್ವಾಮಿ ದಂಪತಿಗಳು ಪೂಜೆ ಸಲ್ಲಿಸಿದ್ದರು. |