ಶ್ರೀರಂಗಪಟ್ಟಣ-ಮೈಸೂರು ಷಟ್ಪಥ ರಸ್ತೆಗೆ ಚಾಲನೆ
ಬೆಂಗಳೂರು: ಬೆಂಗಳೂರು ಮತ್ತು ಮೈಸೂರು
ಚತುಷ್ಪಥ ರಸ್ತೆಯನ್ನು ದಸರಾದ ಕೊಡುಗೆಯಾಗಿ ಪ್ರಾರಂಭಿಸಲು
ಹಿಂದಿನ ವರ್ಷ ಅಗಸ್ಟ್ ೩೧ ರಂದು ನಿರ್ಧರಿಸಲಾಗಿತ್ತು. ಆದರೆ ಪ್ರಸ್ತುತ
ವಾಹನ ದಟ್ಟಣೆ ಹೆಚ್ಚಿದ ಹಿನ್ನಲೆಯಲ್ಲಿ ಅದನ್ನು ಷಟ್ಪಥ ರಸ್ತೆಯನ್ನಾಗಿ
ಮಾಡಲು ರಾಜ್ಯಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಗಸ್ಟ್
೩೧ ರಂದು ಮೈಸೂರಿನಲ್ಲಿ ಶ್ರೀರಂಗಪಟ್ಟಣ-ಮೈಸೂರು ಷಟ್ಪಥ
ರಸ್ತೆಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು-ಮೈಸೂರು ಚತುಷ್ಪಥ ರಸ್ತೆ
ಕಾಮಗಾರಿ ಶೇ.೯೯ರಷ್ಟು ಮುಗಿದಿದೆ. ಚನ್ನಪಟ್ಟಣದಲ್ಲಿ ಜನರ ಅನುಕೂಲಕ್ಕಾಗಿ
ಸುರಂಗಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಆದರೆ ಇದು ರಾಷ್ಟ್ರೀಯ
ಹೆದ್ದಾರಿ ಯೋಜನೆ ಅಡಿಯಲ್ಲಿಬರುವುದಿಲ್ಲ. ಚತುಷ್ಪಥ ರಸ್ತೆಗಾಗಿ ೩೩೦
ಕೋ.ರೂಗಳನ್ನು ವ್ಯಯಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಸಹಾಯಕ
ಕಾರ್ಯನಿರ್ವಾಹಕ ಅಭಿಯಂತರರಾದ ಶಂಕರಗೌಡ ತಿಳಿಸಿದ್ದಾರೆ.