ಕೇರಳ: ಹೆಚ್ಚು ವೇತನ ಆಗ್ರಹಿಸಿ ವೈದ್ಯರ ಮುಷ್ಕರ
ತಿರುವನಂತಪುರ : ಕೇರಳದ ಸಾರ್ವಜನಿಕ
ಆರೋಗ್ಯ ವ್ಯವಸ್ಥೆಯ ಮುಖ್ಯ ವೈದ್ಯಾಧಿಕಾರಿಗಳು ಸತತ ೨೪
ಗಂಟೆಗಳ ಕಾಲ(ಬುಧವಾರ) ಮುಷ್ಕರ ಹೂಡಿದ್ದ ಪರಿಣಾಮ
ರೋಗಿಗಳು ಚಿಕಿತ್ಸೆಯಿಲ್ಲದೆ ಬಳಲುವಂತಾಗಿದೆ.
ತಮ್ಮ ವೇತನ ಹೆಚ್ಚಿಸುವಂತೆ ವೈದ್ಯರು
ಕೇರಳ ಸರಕಾರವನ್ನು ಆಗ್ರಹಿಸಿದ್ದಾರೆ. ಕೇರಳ ಸರಕಾರ ವೈದ್ಯಾಧಿಕಾರಿಗಳ
ಸಂಘ ಕರೆ ನೀಡಿದ್ದ ಈ ಬಂದ್ಗೆ ತಾಲ್ಲೂಕು ಮಟ್ಟದಲ್ಲಿ ಕೆಲಸ ಮಾಡುತ್ತಿರುವ
ವೈದ್ಯರೂ ಕೈಜೋಡಿಸಿದ್ದಾರೆ.
ಆದಾಗ್ಯೂ ತುರ್ತು ಸೇವೆಗಳನ್ನು ವೈದ್ಯರು
ನಿರ್ವಹಿಸಲು ವೈದ್ಯರು ಒಪ್ಪಿಕೊಂಡು ಮಾನವೀಯತೆಯನ್ನು
ಗೌರವಿಸಿದ್ದಾರೆ. ವೇತನ ಹೆಚ್ಚಿಸುವಂತೆ ಸರಕಾರಕ್ಕೆ ಮಾಡಿರುವ ಮನವಿಗಳೆಲ್ಲವನ್ನೂ
ಸರಕಾರ ಪಕ್ಕಕ್ಕಿಟ್ಟಿರುವುದರಿಂದ ಮುಷ್ಕರ ಕೈಗೊಳ್ಳದೇ ಬೇರ
ವಿಧಿಯಿರಲಿಲ್ಲ ಎಂದು ಮುಷ್ಕರ ನಿರತ ವೈದ್ಯಾಧಿಕಾರಿಗಳು ಹೇಳಿದ್ದಾರೆ.