|
ಕಾವೇರಿ ಜಲನ್ಯಾಯ ಮಂಡಳಿ ಅವಧಿ ವಿಸ್ತರಣೆ
ನವದೆಹಲಿ : ಕಾವೇರಿ ಜಲನ್ಯಾಯ ಮಂಡಳಿ ಅವಧಿಯನ್ನು ಕೇಂದ್ರ ಸರ್ಕಾರ
ಆರು ತಿಂಗಳ ಕಾಲ ವಿಸ್ತರಿಸಿ ಅಧಿಸೂಚನೆಯೊಂದನ್ನು ಹೊರಡಿಸಿದೆ.
ಕಾವೇರಿ ಜಲ ನ್ಯಾಯಮಂಡಳಿಯ ಅವಧಿ ಪ್ರಸಕ್ತ ಆಗಸ್ಟ್ ೬ರಂದು
ಮುಕ್ತಾಯಗೊಳ್ಳಲಿದೆ. ಕರ್ನಾಟಕ-ತಮಿಳು ನಾಡು ಮಧ್ಯೆ ಕಾವೇರಿ ನೀರನ್ನು
ಹಂಚಿಕೊಳ್ಳುವ ಬಗ್ಗೆ ಶತಮಾನದಷ್ಟು ಹಳೆಯ ವಿವಾದವನ್ನು ಬಗೆಹರಿಸುವುದಕ್ಕಾಗಿ
ಕೇಂದ್ರ ಸರ್ಕಾರ ನ್ಯಾಯ ಮಂಡಳಿಯನ್ನು ಸ್ಥಾಪಿಸಿದೆ.

ನ್ಯಾಯಮೂರ್ತಿ ಎನ್.ಪಿ.ಸಿಂಗ್ ನೇತೃತ್ವದ ನ್ಯಾಯ ಮಂಡಳಿ ಇತ್ತೀಚೆಗೆ
ತನ್ನ ಅಂತಿಮ ತೀರ್ಪನ್ನು ಕಾದಿರಿಸಿದ್ದು, ಅದನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ. |