ಮಣಿಪಾಲದಲ್ಲಿ
ನಡೆಯುತ್ತಿದ್ದ ಲೈವ್ ಬ್ಯಾಂಡ್ಗೆ ಕೆಲವು ವ್ಯಕ್ತಿಗಳು ದಾಳಿ ಮಾಡಲಿದ್ದಾರೆ
ಎಂಬ ಸುದ್ದಿ ತಿಳಿದ ಹಿತೇಂದ್ರ ಪ್ರಸಾದ್ ಸಚಿತ್ರ ವರದಿ ಮಾಡಲೆಂದು
ತೆರಳಿದ್ದ ಸಂದರ್ಭ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ
`ಹಾಯ್ ಮಾರುತ' ಪತ್ರಿಕೆಯಲ್ಲಿ ಲೈವ್ ಬ್ಯಾಂಡ್ ಬಗ್ಗೆ ಬರೆದಿರುವ
ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಕೂಡಾ ಸಂಶಯಿಸಲಾಗುತ್ತಿದೆ.
ರಾತ್ರಿ
ಸುಮಾರು ೧೦:೩೦ ರ ವೇಳೆಗೆ ಹಿತೇಂದ್ರ ಪ್ರಸಾದ್ ಮಣಿಪಾಲದ ಲೈವ್
ಬ್ಯಾಂಡ್ಗೆ ತೆರಳಿದ್ದು, ಅಲ್ಲಿದ್ದ ದುಷ್ಕರ್ಮಿಗಳ ತಂಡ ತಲವಾರಿನಿಂದ
ಕಡಿದು ಹಲ್ಲೆ ಮಾಡಿತ್ತು. ತುಂಬ ಹೊತ್ತು ಸ್ಥಳದಲ್ಲೇ ಬಿದ್ದಿದ್ದ ಹಿತೇಂದ್ರನನ್ನು
ಬಳಿಕ ಮಣಿಪಾಲ ಕೆ. ಎಂ. ಸಿ. ಆಸ್ಪತ್ರೆಗೆ ಸೇರಿಸಲಾಗಿತ್ತು, ರಾತ್ರಿ
೧೨:೩೦ರ ಸುಮಾರಿಗೆ ಮೃತಪಟ್ಟಿದ್ದಾರೆ.