ಮತ್ತೊಂದು ಬೆಂಗಳೂರಾಗಲಿರುವ ಉತ್ತರಾಂಚಲ
?
ಡೆಹ್ರಾಡೂನ್: ಉತ್ತರಾಂಚಲವು ಭಾರತದ
ಸಿಲಿಕಾನ್ ಸಿಟಿ ಬೆಂಗಳೂರಿನ ದಾರಿಯಲ್ಲೆ ಮುಂದುವರೆಯುತ್ತಿದೆ.
ಕೇಂದ್ರ ತಂತ್ರಜ್ಞಾನ ಮತ್ತು ಸಂವಹನ ಸಚಿವ ದಯಾನಿಧಿ ಮಾರನ್
ಉತ್ತರಾಂಚಲವು ಮತ್ತೊಂದು ಬೆಂಗಳೂರಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ
ಮಾರನ್, ಬೆಂಗಳೂರಿನಲ್ಲಿ ಒಳ್ಳೆಯ ವಾತಾವರಣ ಇದೆ. ಅಲ್ಲಿ ಉತ್ತಮ
ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಮತ್ತಿತರ ಸೌಲಭ್ಯಗಳಿವೆ.
ಉತ್ತರಾಂಚಲದಲ್ಲಿಯೂ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳು
ಉತ್ತಮ ಮಟ್ಟದಲ್ಲಿವೆ. ಉತ್ತರಾಂಚಲವನ್ನು ನಾವು ಇನ್ನೊಂದು ಐಟಿ ಹಬ್
ಆಗಿ ರೂಪಿಸಬಹುದು ಎಂದು ಆಶಿಸಿದ್ದಾರೆ.