|
ಶತಾಬ್ದಿ ರೈಲಿನಲ್ಲಿ
ಗುಂಡು ತಗುಲಿ ಆಟಗಾರ ಗಾಯಾಳು
ಚಂದೀಗಢ:
ದೆಹಲಿ-ಕಲ್ಕ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಆಕಸ್ಮಿಕವಾಗಿ ಸಿಆರ್ಪಿಎಫ್
ಯೋಧನ ಗುಂಡು ತಾಗಿ ಹಾಕಿ ಆಟಗಾರ ಸಂದೀಪ್ ಸಿಂಗ್
ಗಾಯಗೊಂಡಿದ್ದಾರೆ.
ಕೇಂದ್ರಿಯ
ಮೀಸಲು ಪಡೆಯ ಯೋಧನ ರೈಫಲ್ ನಿಂದ ಆಕಸ್ಮಿಕವಾಗಿ ಗುಂಡು
ಸಂದೀಪ್ ಸಿಂಗ್ ಕಾಲಿಗೆ ಬಡಿಯಿತು. ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ
ಚಿಕಿತ್ಸೆಯ ನಂತರ ಚಂದೀಗಢದ ಆಸ್ಪತ್ರೆಗೆ
ದಾಖಲಿಸಲಾಯಿತು ಎಂದು ಭಾರತೀಯ ಹಾಕಿ ಫೇಡರಷನ್ ಉಪಾಧ್ಯಕ್ಷ
ಚಂದ್ರಶೇಖರ್ ಹೇಳಿಕೆ
ನೀಡಿದ್ದಾರೆ.
ಪೆನಾಲ್ಟಿ ಕಾರ್ನರ್ ತಜ್ಞ ಸಂದೀಪ್ ಸಿಂಗ್ ತಂಡದ ಇತರ ಆಟಗಾರರೊಂದಿಗೆ
ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಂದೀಪ್ ಸಿಂಗ್
ದೇಹಸ್ಥಿತಿ ಸುಸ್ಥಿತಿಯಲ್ಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. |