ಷಹನಾಯಿ
ಮಾಂತ್ರಿಕ ಬಿಸ್ಮಿಲ್ಲಾ ಖಾನ್ ನಿಧನ
ಮೃತರ ಗೌರವಾರ್ಥ ಸೋಮವಾರ ರಾಷ್ಟ್ರೀಯ ಶೋಕಾಚರಣೆ
ವಾರಣಾಸಿ: ಖ್ಯಾತ ಷಹನಾಯಿ ವಾದಕ, ಭಾರತರತ್ನ, ಉಸ್ತಾದ್
ಬಿಸ್ಮಿಲ್ಲಾ ಖಾನ್ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಅವರಿಗೆ ೯೦ ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ
ನಿಮಿತ್ತ ಕಳೆದ ವಾರ ವಾರಣಾಸಿಯ ಆಸ್ಪತ್ರೆಯ ಐಸಿಯು ಘಟಕದಲ್ಲಿ
ದಾಖಲಾಗಿದ್ದರು.
ಸರ್ಕಾರವು
ಬಿಸ್ಮಿಲ್ಲಾಖಾನ್ಗೆ ಗೌರವ ಸೂಚಕವಾಗಿ ಒಂದು ದಿನದ ಶೋಕಾಚರಣೆಯನ್ನು
ಘೋಷಿಸಿದೆ. ಸಕಲ ಸರ್ಕಾರಿ ಮರ್ಯಾದೆಯಿಂದ ಮೃತರ ಅಂತಿಮ ಸಂಸ್ಕಾರವನ್ನು
ನೆರವೇರಿಸಲಾಗುವುದು ಎಂದು ಗೃ
ಹ ಇಲಾಖೆಯ ಅಧಿಕಾರಿಗಳು
ತಿಳಿಸಿದ್ದಾರೆ.
ಪ್ರಧಾನಿ
ಮನಮೋಹನ್ ಸಿಂಗ್ ಹಾಗೂ ರಾಷ್ಟ್ರಪತಿ ಅಬ್ದುಲ್ ಕಲಾಂ ತಮ್ಮ ಸಂತಾಪ
ವ್ಯಕ್ತಪಡಿಸಿದ್ದಾರೆ.
ಬಿಸ್ಮಿಲ್ಲಾ ಖಾನ್ಗೆ ಭಾರತರತ್ನ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
ತಾನ್ ಸೇನ್ ಪ್ರಶಸ್ತಿ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿವೆ.