ನಾಡಹಬ್ಬದ
ಉದ್ಘಾಟನೆಗೆ ಸಾಹಿತಿ ಜಿ. ನಾರಾಯಣ್
`ಈ ಆಹ್ವಾನ ಸಂತಸ ತಂದಿದೆ'
ಮೈಸೂರು
: ಹಿರಿಯ ಗಾಂಧಿವಾದಿ, ಸಾಹಿತಿ ಜಿ. ನಾರಾಯಣ ಈ ಬಾರಿಯ ನಾಡಹಬ್ಬ
ದಸರಾ ಉದ್ಘಾಟಿಸಲಿದ್ದಾರೆ.
ಸೆಪ್ಟೆಂಬರ್ ೨೩ರಂದು ದಸರಾ ಉದ್ಘಾಟನೆ ನಡೆಯಲಿದೆ. ಇದಕ್ಕಾಗಿ ಎಲ್ಲ
ಸಿದ್ಧತೆಗಳೂ ಮೈಸೂರಿನಲ್ಲಿ ಭರದಿಂದ ನಡೆಯುತ್ತಿದೆ. ಅದ್ಧೂರಿ
ದಸರಾ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.
ಡಿ. ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ.
ಅವರು ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಮತ್ತು ಸರಕಾರಿ ರಾಂ ನಾರಾಯಣ್
ಚೆಲ್ಲಾರಾಂ ಕಾಲೇಜುಗಳ ನೂತನ ಕಟ್ಟಡಗಳಿಗೆ ಶಂಕುಸ್ಥಾಪನೆ ನಡೆಸಿ
ಮಾತನಾಡುತ್ತಿದ್ದರು.
ದಸರಾ ಹಬ್ಬ ಉದ್ಘಾಟನೆಯ ಆಹ್ವಾನದ ಬಗ್ಗೆ ಜಿ. ನಾರಾಯಣ್ ಸಂತಸ
ವ್ಯಕ್ತಪಡಿಸಿದ್ದು, ನಾಡಹಬ್ಬ ಉದ್ಘಾಟಿಸುವುದು ನನ್ನ ಕರ್ತವ್ಯವೆಂದು
ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.