ಶಬರಿಮಲೆ:ಕೇರಳ ಸರರ್ಕಾಕ್ಕೆ ಕೋರ್ಟ್ ನೊಟೀಸ್
ನವದೆಹಲಿ
: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ
ನಿರಾಕರಿಸುವ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು
ಪುರಸ್ಕರಿಸುವ ಸುಪ್ರೀಂ ಕೋರ್ಟ್ ಕೇರಳ ಸರಕಾರಕ್ಕೆ ನೊಟೀಸ್
ಜಾರಿ ಮಾಡಿದೆ.
ಮುಖ್ಯ
ನ್ಯಾಯಾಧೀಶರಾದ ವೈ. ಕೆ. ಸಭರ್ವಾಲ್ ನೇತೃತ್ವದ
ಕೋರ್ಟ್ಪೀಠ ತಿರುವಾಂಕೂರ್ ದೇವಸ್ವಂ ಮಂಡಳಿಯ ದೇವಸ್ವಂ
ಆಯುಕ್ತ, ಪಟನಂತಿಟ್ಟದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಅಯ್ಯಪ್ಪ
ದೇವಸ್ಥಾನದ ಮುಖ್ಯ ತಂತ್ರಿಗಳಿಗೂ ನೊಟೀಸ್ ಜಾರಿಗೊಳಿಸಿದೆ.
ಯುವ ವಕೀಲರ ಸಂಘವು ಶಬರಿಮಲೆ ದೇವಸ್ಥಾನದಲ್ಲಿ ೧೦ ರಿಂದ ೫೦
ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿರಾಕಣೆಯನ್ನು ಪ್ರಶ್ನಿಸಿ
ಅರ್ಜಿ ಸಲ್ಲಿಸಿದ್ದಾರೆ.