ಮುಂಬಯಿಯಲ್ಲಿ
ಮತ್ತೊಂದು ಕನ್ನಡ ಸಮ್ಮೇಳನ
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ
ಉಡುಪಿ: ಅಖಿಲ ಭಾರತ ೧೦ ನೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ
ಸಮ್ಮೇಳನವನ್ನು ಡಿಸೆಂಬರ್ ೨ ಮತ್ತು ೩ ರಂದು ಮುಂಬಯಿಯಲ್ಲಿ
ನಡೆಸಲು ನಿರ್ಧರಿಸಲಾಗಿದೆ ಎಂದು ಸಮ್ಮೇಳನದ ಸಂಚಾಲಕ ಬಿ.ಸಾಮಗ
ಹೇಳಿದ್ದಾರೆ.
ಸಮ್ಮೇಳನದಲ್ಲಿ ಕನ್ನಡ ವಿದ್ಯಾರಣ್ಯ ಪ್ರಶಸ್ತಿ, ಶ್ರೇಷ್ಠ ಸಾಮಾಜಿಕ
ಕಾರ್ಯಕರ್ತ ಪ್ರಶಸ್ತಿ, ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ ಹಾಗೂ ಗಣನೀಯ
ಸೇವೆ ಸಲ್ಲಿಸಿದ ಇತರ ಕನ್ನಡಿಗರನ್ನೂ ಗೌರವಿಸಲಾಗುವುದು ಎಂದು
ಸಂಚಾಲಕರು ತಿಳಿಸಿದ್ದಾರೆ.
`ದೆಹಲಿ
ಕನ್ನಡಿಗ' ಪತ್ರಿಕೆಯ ಆಶ್ರಯದಲ್ಲಿ ನಡೆಯುವ
ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಗೆ
ಸಂಬಂಧಿಸಿದ
ವಿಚಾರ ಸಂಕಿರಣ, ಕವಿಗೋಷ್ಠಿ, ನಾಟಕ, ನೃತ್ಯ ಹಾಗೂ ಪುಸ್ತಕ ಪ್ರದರ್ಶನವನ್ನು
ಹಮ್ಮಿಕೊಳ್ಳಲಾಗಿದೆ.