ಶ್ರೀ ಕೃಷ್ಣ ಸ್ಮರಣೆ
ಪ್ರತಿಭಾ ನಂದಕುಮಾರ್
-೧-
ಬೇಳಿ ಹುಳಿ ವಾಸನೆಯ ಹುಡುಗಿಯರ
ಮನ
ಕೆಡಿಸಿ ಮರ್ತ್ಸ್ಯಗಂಧಿಯರ ಮಾಡಬಯಸಿದ
ಬೆವರ
ವಾಸನೆಯ ಹುಡುಗ
ಕೊನೆಗೆ ಮಣ್ಣಲ್ಲಿ ಒಂದಾಗಿ
ನಿನ್ನ
ಗೋರಿಯ ಮೇಲೆ ಸಸಿ ಹುಟ್ಟಿ
ಅವರ ತುರುಬಿಗೆ ಹೂವಾದವು.
ಹೂವ
ಸುಗಂಧವೇ ಬೇರೆ.
-೨-
ವರ್ಣಗಳಲ್ಲಿ ಭೇದ ಕಂಡು ಕನಲಿದ ಹುಡುಗ
ಎಲ್ಲ ಬಣ್ಣಗಳ ಕಲಸಿ ಒಂದು ಮಾಡುವೆನೆಂದ
ಕಪ್ಪು
ಕತ್ತಲೆ ಸೀಳಿ ಬೆಳಕು ಮೂಡುವ ಮೊದಲು
ಕಾಡಿನ ಹಾದಿ ತಿಳಿಯದೆ ಬಳಲಿದ
ಕಂದು ಬಣ್ಣದ ಕುದುರೆ ಏರಿ ಮಾಯವಾದ.
ಖುರ ಪುಟದ ಪ್ರತಿಧ್ವನಿ ಮಾತ್ರ ಸ್ಪಷ್ಟ.
-೩-
ಹೊತ್ತು
ಮುಳುಗಿದ ಮೇಲೆ
ಕಾಡಿನ ಗೀಜಗನ ಗೂಡಲ್ಲಿ
ಕೊಳಲುಲಿತ
ಕಶ್ಮರೆಯಾದ
ಕೃಷ್ಣನ ಶೇಷ
-೪-
ಭಾಗವತರಿಗೆ
ಪ್ರೀತಿ ಬಾಲಕೃಷ್ಣನ ಲೀಲೆ
ಗೋಕುಲದ ಹುಡುಗಿಯರ ಕಣ್ಣು ಸುಂದರಾಂಗನ ಮೇಲೆ
ಆಸಕ್ತರಿಗೆ ಗೀತೋಪದೇಶ ಮಾಲೆ
ಸಾವು
ಕರೆದಾಗ ಬಿಟ್ಟು ಹೊರಟವನ ಕಂಡು
ಎಲ್ಲರೆದೆಯಲ್ಲಿ ಮರುಕದ ಜಲಧಾರೆ.