ಗೊಂದಲದಲ್ಲಿ ರಾಜ್ ಶಿಲ್ಪ ಸ್ಥಾಪನೆ ಯೋಜನೆ
ಬೆಂಗಳೂರು: ಡಾ.ರಾಜ್ ಶಿಲ್ಪವನ್ನು ಟೌನ್ ಹಾಲ್ ಬಳಿ ಸ್ಥಾಪಿಸುವ
ಬೆಂಗಳೂರು ಮಹಾನಗರ ಪಾಲಿಕೆಯ ಯೋಜನೆಯಲ್ಲಿ
ಅಪಸ್ವರಗಳು ಕಾಣಿಸಿವೆ.
ಕರ್ನಾಟಕ
ಶಿಲ್ಪಕಲಾ ಅಕಾಡೆಮಿಯ ನಿರ್ದೇಶಕ ವೆಂಕಟಾಚಲಪತಿ ಪ್ರಕಾರ ಶಿಲ್ಪಕಲಾ
ಉದ್ಯಾನವನದಲ್ಲಿ ರಾಜ್ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆ ಸರಕಾರಕ್ಕಿದೆ.
ಆದರೆ ಈ ನಡುವೆ ಟೌನ್ ಹಾಲ್ ಬಳಿಯೂ ರಾಜ್ ಶಿಲ್ಪ ಸ್ಥಾಪಿಸುವ ಯೋಜನೆ
ಸರಿಯಲ್ಲ. ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವವಿದೆ.
ಆದರೆ ಶಿಲ್ಪ ಸ್ಥಾಪನೆಯ ಬಗ್ಗೆ ಸರಿಯಾದ ಆದೇಶ ಬಂದಿಲ್ಲವೆಂದು
ಅಕಾಡೆಮಿಯ ವೆಂಕಟಾಚಲಪತಿ ಹೇಳಿದ್ದಾರೆ.
ಈ
ನಡುವೆ ಬಿಜೆಪಿಯ ಸಂಸದ ಅನಂತ್ ಕುಮಾರ್ ಎನ್ .ಆರ್. ಕಾಲೋನಿಯಲ್ಲಿ
ನಡೆದ ಸಮಾರಂಭದಲ್ಲಿ ಮಾತನಾಡುತ್ತಾ ಎನ್.ಆರ್.ಕಾಲೋನಿಯಲ್ಲಿ
ಡಾ.ರಾಜ್ ಶಿಲ್ಪವನ್ನು ಸ್ಥಾಪಿಸಲಾಗುವುದು ಎಂದು ಹೇಳಿರುವುದು ಮತ್ತಷ್ಟು
ಗೊಂದಲಕ್ಕೆಡೆ ಮಾಡಿದೆ.
ಪೂರಕ ಓದಿಗೆ
ಕಲಾಕ್ಷೇತ್ರದ ಬಳಿ
ಶಿಲ್ಪಕಲಾ ಉದ್ಯಾನ ಸ್ಥಾಪನೆ