Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಬುಡಕಟ್ಟು ಜನರಿಂದ ನಾಡದಸರಾಕ್ಕೆ ಬಹಿಷ್ಕಾರ

`ಮಾವುತರಿಂದ ದಸರಾ ಉದ್ಘಾಟಿಸಿ

 

ಮೈಸೂರು: ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯು ಈ ಬಾರಿಯ ದಸರಾವನ್ನು ಬಹಿಷ್ಕರಿಸುವುದಾಗಿ ಪ್ರಕಟಿಸಿದೆ.

 

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಅಗಸ್ಟ್ ೧೫ ರ ಒಳಗೆ ನಾಗರಹೊಳೆಯ ಬುಡಕಟ್ಟು ಜನಾಂಗದ ಸಮಸ್ಯೆಗೆ ಪರಿಹಾರವನ್ನು ನೀಡದಿದ್ದರೆ ದಸರಾ ದಿನದಂದು ಧರಣಿ ನಡೆಸುವುದಾಗಿ ಗಿರಿಜನ ಸಂಸ್ಥೆಯ ಸಂಯೋಜಕ ಎಂ.ಬಿ. ಪ್ರಭು ಎಚ್ಚರಿಕೆ ನೀಡಿದ್ದಾರೆ.

 

ಸುದ್ದಿಗಾರರಿಗೆ ಭಾನುವಾರ ಈ ವಿಷಯ ತಿಳಿಸಿದ ಪ್ರಭು ನೂರಾರು ಗಿರಿಜನರು ದಸರಾ ವೇಳೆಯಲ್ಲಿ ಮಾವುತರಾಗಿ, ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಾರೆ. ಕೆಲವರನ್ನು ತಾತ್ಕಾಲಿಕವಾಗಿ ಮಾತ್ರ ಸೇವೆಗೆ ಬಳಸಿಕೊಳ್ಳುತ್ತಿದ್ದಾರೆ ಯಾವುದೇ ರೀತಿಯ ಸೌಲಭ್ಯವನ್ನು ಅವರಿಗೆ ನೀಡಿಲ್ಲ ಎಂದು ದೂರಿದ್ದಾರೆ.

 

ನಾಗಪುರ ಗ್ರಾಮದಲ್ಲಿ ಜನರಿಗೆ ಪುನರ್ವಸತಿ ಕಲ್ಪಿಸುವುದಾಗಿ ಹೇಳಿದ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಇಲ್ಲಿನ ಆಶ್ರಮದ ಶಾಲೆಗಳಿಗೆ ಶಿಕ್ಷಕರಿಲ್ಲ, ಅಡುಗೆ ಮಾಡುವವರು, ವಾರ್ಡನ್‌ಗಳು ಈ ಸ್ಥಾನವನ್ನು ಆಗಾಗ ತುಂಬುತ್ತಿದ್ದಾರೆ ಎಂದು ಪ್ರಭು ಸಮಸ್ಯೆಯ ಚಿತ್ರಣ ನೀಡಿದರು.

 

ದಸರಾ ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಕ್ರೀಡಾಳುಗಳನ್ನು ಕರೆಯುವುದರ ಬದಲು ಹಿರಿಯ ಮಾವುತರನ್ನು ಕರೆದು ಉದ್ಘಾಟಿಸಬೇಕೆಂದು ಅವರು ಸಲಹೆ ನೀಡಿದರು.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com