Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಕಲಾಕ್ಷೇತ್ರದ ಬಳಿ ಶಿಲ್ಪಕಲಾ ಉದ್ಯಾನ ಸ್ಥಾಪನೆ

ಬೆಂಗಳೂರು: ಪುರಭವನ ಹಾಗೂ ರವೀಂದ್ರ ಕಲಾಕ್ಷೇತ್ರದ ನಡುವೆ ಇರುವ ಎರಡು ಎಕರೆ ವಿಸ್ತೀರ್ಣದ ಜಾಗದಲ್ಲಿರುವ ಉದ್ಯಾನವನದಲ್ಲಿ ಶಿಲ್ಪಕಲಾ ಕೃತಿಗಳು ತಲೆದೋರಲಿವೆ.

ಸುವರ್ಣ ಕರ್ನಾಟಕದ ಮಹೋತ್ಸವದ ಅಂಗವಾಗಿ ಸುಮಾರು ೨೦ ಕೋಟಿ ವೆಚ್ಚದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಂಯುಕ್ತವಾಗಿ ಈ ಉದ್ಯಾನವನವನ್ನು ನಿರ್ಮಿಸುತ್ತಿದೆ.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ. ಎಸ್. ನಿರಂಜನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಿಲ್ಪಕಲೆಗಳ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹೊಸ ಪುಸ್ತಕ ಮಳಿಗೆ, ಹೊಸ ಉಪಹಾರ ಗೃಹವನ್ನು ತೆರಯಲಾಗುವುದು ಎಂದರು.

 

ಕೇಂದ್ರ ಕಚೇರಿಯು ಯೋಜನೆಗೆ ೮ ಲಕ್ಷ ಸಹಾಯಧನ ನೀಡಿದೆ. ಉದ್ಯಾನವನದ ಉಸ್ತುವಾರಿಯನ್ನು ಕೆನರಾ ಬ್ಯಾಂಕ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ಉದ್ಯಾನವನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ.

 

ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಲಿರುವ ಡಾ.ರಾಜ್ ಪುತ್ತಳಿಯನ್ನು ಉದ್ಯಾನವನದ ಸಮೀಪದಲ್ಲಿ ಇರಿಸುವ ಸಾಧ್ಯತೆಯಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com