ಗೂಢಚಾರಿಕೆ :ರಾಗ ಬದಲಿಸಿದ ಜಸ್ವಂತ್ !
ನವದೆಹಲಿ:
ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಅಧಿಕಾರಿಯೊಬ್ಬ ಅಮೆರಿಕಾದ ಪರವಾಗಿ ಗೂಢಚಾರ ಮಾಡುತ್ತಿದ್ದ ಎಂದು ತಮ್ಮ
ಪುಸ್ತಕದಲ್ಲಿ ಬರೆದಿದ್ದಲ್ಲದೇ, ಆ ವ್ಯಕ್ತಿಯ ಹೆಸರನ್ನು ತಾವು ಪ್ರಧಾನಿ ಮನಮೋಹನ್
ಸಿಂಗ್ ಅವರಿಗೂ ತಿಳಿಸಿದ್ದೇನೆ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಮಾಜಿ ವಿದೇಶಾಂಗ
ಸಚಿವರಾದ ಜಸ್ವಂತ್ ಸಿಂಗ್, ಆ ಗೂಢಚಾರನ ಹೆಸರು ತಮಗೂ ತಿಳಿದಿಲ್ಲ ಎಂದು ಹೇಳುವ
ಮೂಲಕ ಪ್ರಕರಣದಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ.
ಈ ಮೊದಲು ಪ್ರಧಾನಿ
ಮನಮೋಹನ್ ಸಿಂಗ್ಗೆ ಬರೆದ ಪತ್ರದಲ್ಲಿ ಗೂಢಾಚಾರನ ಹೆಸರು ಬರೆದಿದ್ದೇನೆ ಎಂದಿದ್ದ
ಜಸ್ವಂತ್ ಸಿಂಗ್, ನಿನ್ನೆ ಹೇಳಿಕೆ ನೀಡಿ ಗೂಢಾಚಾರಿ ಯಾರೆಂದು ನನಗೆ ಗೊತ್ತಿಲ್ಲ. ಕೇವಲ ಶಂಕೆಯಿಂದಷ್ಟೇ
ಆ ಬಗ್ಗೆ ಬರೆದಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.
ಅಲ್ಲದೇ, ದೇಶದ್ರೋಹಿ
ಗೂಢಚಾರನ ಕುರಿತು ರಾಜ್ಯಸಭೆಯಲ್ಲಿ ಯಾವುದೇ ಪ್ರಶ್ನೆ ಎದುರಾದರೂ ನಾನದಕ್ಕೆ
ಸೂಕ್ತ ಉತ್ತರ ನೀಡಲಿದ್ದೇನೆ ಎಂದಿದ್ದಾರೆ ಜಸ್ವಂತ್.