|
ವಿಂಡೋಸ್ ಬಿಟ್ಟೇವು, ಕಾವೇರಿ ಕೊಡೆವು
ಹೀಗೊಂದು ವಿಭಿನ್ನ ಪ್ಲೆಕಾರ್ಡ್...
ಇನ್ನೊಂದು ಪ್ಲೆಕಾರ್ಡ್ನಲ್ಲಿ ಪುಟ್ಟದೊಂದು `ಸಿ' ಪ್ರೋಗ್ರಾಂ... ಅದು `ಕರ್ನಾಟಕ
= ಐಟಿ + ಕಾವೇರಿ' ಎಂದು ಸಾರುತ್ತಿತ್ತು. ಇದು ಇದೇ ರವಿವಾರ
ಬೆಂಗಳೂರಿನ ಎಂ.ಜಿ ರಸ್ತೆಯ ಗಾಂಧೀಪ್ರತಿಮೆ ಬಳಿ ಸೇರಿದ್ದ
ಯುವಕರ ಗುಂಪು ಕಾವೇರಿ ತೀರ್ಪಿನ ವಿರುದ್ಧ ವಿಭಿನ್ನವಾಗಿ
ಪ್ರತಿಭಟಿಸಿದ ರೀತಿ.
ಕನ್ನಡ ನೆಲದ ಸಮಸ್ಯೆಗಳಿಗೆ ಸ್ಪಂದಿಸದೇ ಐಶಾರಾಮಿ ಗಾಜಿನ ಮನೆಗ ಲ್ಲಿ
ಕೆಲಸ ಮಾಡುವವರು ಎಂಬ ಟೀಕೆಗೆ ಗುರಿಯಾಗಿದ್ದ ಐಟಿ ಕನ್ನಡ ಸಮೂಹ
ಕಾವೇರಿಗಾಗಿ ಬೀದಿಗಿಳಿಯುವ ಮೂಲಕ ತಮ್ಮಲ್ಲೂ ಈ ನೆಲದ ಬಗ್ಗೆ
concern
ಇದೆ ಎಂದು ಸಾಬೀತು ಮಾಡಿದ್ದಾರೆ.
ಐಟಿ ರಂಗದ ನಾಯಕ ಎನಿಸಿಕೊಳ್ಳುತಿರುವ ನಾರಾಯಣ ಮೂರ್ತಿಯಂತವರು
ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬ
ಅತಿರೇಕದ ಹೇಳಿಕೆಗಳನ್ನು ನೀಡುತ್ತಿರುವಾಗಲೇ ಅವರದೇ ಸಮೂಹದ
ಕನ್ನಡಿಗ ಯುವಕ ಯುವತಿಯರು ಈಗ ಕಾವೇರಿಗಾಗಿ ಬೀದಿಗಿಳಿಯುವ
ಮೂಲಕ ಕನ್ನಡ ರಾಷ್ಟ್ರೀಯತೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
ಪ್ರತಿಭಟನೆಯ ಚಿತ್ರಗಳು




 

|