|
ಸಮಾಜ ಸೇವಕರ ಸಮಿತಿಯವರಿಂದ ಪ್ರಬ೦ಧ ಸ್ಪರ್ಧೆ
ಬೆಂಗಳೂರು: ದಾರ್ಶನಿಕ ಕವಿ ಡಾ||ಡಿ.ವಿ.ಗು೦ಡಪ್ಪನವರ
೧೨೦ನೇ ಜನ್ಮ ದಿನಾಚರಣೆಯ ಅಂಗವಾಗಿ ಸಮಾಜ ಸೇವಕರ
ಸಮಿತಿಯು ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆಯನ್ನು ಏರ್ಪಡಿಸಿದೆ.
`ಎಲ್ಲರೊಳಗೊ೦ದಾಗು ಮ೦ಕುತಿಮ್ಮ - ಈ
ಸಾಲನ್ನು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಈ ಸಾಲಿನ
ಹಿ೦ದಿರುವ ಕವಿಯ ಉದ್ದೇಶವೇನು?' ಎನ್ನುವುದು ಪ್ರಬಂಧದ
ವಿಷಯವಾಗಿದೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಯಾರು ಬೇಕಾದರೂ
ಭಾಗವಹಿಸಬಹುದಾಗಿದ್ದು ಪ್ರಬಂಧವು
A4
ಅಳತೆಯ ಒಂದೇ ಮಗ್ಗುಲಲ್ಲಿದ್ದು ೨ ಪುಟ ಮೀರಿರಬಾರದು. ೨೦೦೭
ಫೆಬ್ರವರಿ ೮ ಪ್ರಬಂಧ ಸಲ್ಲಿಸಲು ಕೊನೆಯ
ದಿನಾಂಕವಾಗಿದ್ದು ಈ ಸ್ಪರ್ಧೆಗೆ ಯಾವುದೇ ರೀತಿಯ ಪ್ರವೇಶ
ಶುಲ್ಕವಿರುವುದಿಲ್ಲ.
ವಿಜೇತರಿಗೆ ಬಹುಮಾನವನ್ನು ಮಾರ್ಚ್ ೧೭ರಂದು ನಡೆಯಲಿರುವ
ಡಿ.ವಿ.ಜಿ.ಯವರ ಜನ್ಮ ದಿನದಂದು ವಿತರಿಸಲಾಗುವುದು ಎಂದು
ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸಕ್ತರು ತಮ್ಮ ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:
ಸಮಾಜ ಸೇವಕರ ಸಮಿತಿ(ರಿ)
c/o:
ಕಿಚನ್ ಗಾರ್ಡನ್
#೧೯, ೮ನೇ ಮುಖ್ಯರಸ್ತೆ,
ಇಂಡಸ್ಟ್ರಿಯಲ್ ಏರಿಯಾ, ಬನಶಂಕರಿ ೨ನೇ ಹಂತ,
ಬೆಂಗಳೂರು.
ವಿಚಾರಣೆಗಾಗಿ: ರಾಜ್ಕುಮಾರ್ ೯೪೪೮೧೭೧೦೬೯, ಅಥವಾ ರಾಘವೇಂದ್ರ
೯೮೮೬೬೮೩೦೦೮ ನ್ನು ಸಂಪರ್ಕಿಸಬಹುದಾಗಿದೆ.
ಚಿತ್ರ ಕೃಪೆ: ಕನ್ನಡ ಸ್ಟೋರ್.ಕಾಂ
ಇನ್ನಷ್ಟು
ಎಎಕ್ಸ್ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|