|
ಜ.೨೩ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ
ಬೆಂಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
ಸಮಾರಂಭವನ್ನು ಜನವರಿ ೨೩, ಮಂಗಳವಾರದಂದು
ಬಾಗಲಕೋಟದಲ್ಲಿ ಹಮ್ಮಿಕೊಳ್ಳಲಾಗಿದೆ. ಇತ್ತಿಚೆಗೆ ಬಾಗಲಕೋಟೆಗೆ
ಭೇಟಿಯನಿತ್ತ ಮಾಹಿತಿ ನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿ
ಸಮಾರಂಭಕ್ಕಾಗಿ ನಡೆಯುತ್ತಿರುವ ಸಿದ್ಧತೆಯನ್ನು ನೋಡಿ
ಸಂತುಷ್ಟರಾಗಿದ್ದಾರಂತೆ.
ಈ ಸಮಾರಂಭದಲ್ಲಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿರುವ
ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ರನ್ನು ಪ್ರಶಸ್ತಿ ನೀಡಿ
ಗೌರವಿಸಲಾಗುತ್ತಿದೆ. ರವಿಚಂದ್ರನ್ಗೆ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್
ಮತ್ತು `ಜೋಗಿ' ಚಿತ್ರದ ಅಭಿನಯಕ್ಕಾಗಿ ಶಿವರಾಜ್ ಕುಮಾರ್ಗೆ
ವರ್ಷದ ಅತ್ಯುತ್ತಮ ನಾಯಕ ಪ್ರಶಸ್ತಿ ನೀಡಲಾಗುತ್ತಿದೆ.
`ನಾಯಿ-ನೆರಳು' ಚಿತ್ರಕ್ಕೆ ಅತ್ಯತ್ತಮ ನಟಿ ಪ್ರಶಸ್ತಿಗಳಿಸಿದ ಪವಿತ್ರಾ
ಲೋಕೇಶ್, ಗಿನ್ನೀಸ್ ದಾಖಲೆಯ ಅತ್ಯಂತ ಕಿರಿಯ ನಿರ್ದೇಶಕ
ಮಾ||ಕಿಶನ್, ಅಂತರರಾಷ್ಟ್ರೀಯ ಪ್ರೋತ್ಸಾಹಿತ ನಿರ್ದೇಶಕ ಗಿರೀಶ್
ಕಾಸರವಳ್ಳಿ, ಅತ್ಯುತ್ತಮ ಸಹ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ
ನಟ ಜಗ್ಗೇಶ್ ಮುಂತಾದ ಗಣ್ಯರು ಸಮಾರಂಭದಲ್ಲಿ
ಉಪಸ್ಥಿತರಿರಲಿದ್ದಾರೆ.
ಇನ್ನಷ್ಟು
ಎನ್ಕೌಂಟರ್ನಲ್ಲಿ ರೌಡಿ
ರಫೀಕ್ ಹತ್ಯೆ
ಸಾಧುಗಳಿಂದ `ಶಶಿ
ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ
ಇಂದು ಹೊರಬರಲಿರುವ
ನವಜೋತ್ ಸಿಂಗ್ ಸಿಧು
ಅಫ್ಜಲ್ ಕತ್ತಿಗೆ ಬಿಗಿಯಾದ
ನೇಣು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್ಎಲ್ವಿ-ಸಿ೭ದ ಯಶಸ್ವಿ
ಉಡಾವಣೆ
|