|
ಇಂದು ಹೊರಬರಲಿರುವ ನವಜೋತ್ ಸಿಂಗ್ ಸಿಧು
ನವದೆಹಲಿ: ರಸ್ತೆ ಬದಿಯ ಕಲಹದಲ್ಲಿ ಒಬ್ಬ ವ್ಯಕ್ತಿಯ ಸಾವಿಗೆ
ಕಾರಣರಾಗಿ ೩ ವರ್ಷಗಳ ಶಿಕ್ಷೆ ಎದುರಿಸುತ್ತಿರುವ ನವಜೋತ್ ಸಿಂಗ್
ಸಿಧುಗೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಜಿ.ಪಿ ಮಾಥೂರ್ ನೇತೃತ್ವದ ಪೀಠ ಸಿಧುರವರಿಗೆ ೨೫
ಸಾವಿರ ರೂ. ವೈಯಕ್ತಿಕ ಬಾಂಡ್ ಸರ್ವೋಚ್ಚ ನ್ಯಾಯಾಲಯ
ಮತ್ತು ಪಟಿಯಾಲಾ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಶಿಕ್ಷೆಗೆ ತಡೆ ನೀಡುವಂತೆ ಸಿಧು ಸಲ್ಲಿಸಿದ ಅರ್ಜಿಯ ವಿಚಾರಣೆ ಜ.೧೭ಕ್ಕೆ
ನಡೆಯಲಿದೆ. ಒಂದು ವೇಳೆ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿದರೆ
ಸಿಧು ಫೆ. ೧೩ರಂದು ನಡೆಯಲಿರುವ ಅಮೃತಸರ ಲೋಕಸಭಾ
ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಬಹದಾಗಿದೆ.
ಪ್ರಕರಣದ ಕುರಿತು ಗುರುವಾರ ಚಂಡೀಗಢದ ನ್ಯಾಯಾಲಯಕ್ಕೆ
ಸಿಧು ಶರಣಾಗಿದ್ದರು.
ಪಟಿಯಾಲಾ ಜೈಲಿನಿಂದ ಸಿಧು ಶನಿವಾರ ಹೊರಬರಲಿದ್ದಾರೆ.
ಇನ್ನಷ್ಟು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್ಎಲ್ವಿ-ಸಿ೭ದ ಯಶಸ್ವಿ
ಉಡಾವಣೆ
ಬೆಂಗಳೂರು ಡ್ರೀಮ್ಸ್:
ಎಸ್ಸೆಮ್ಮೆಸ್ನಿಂದಲೂ ಮಾಹಿತಿ
ಮಂಗಳೂರಿನಲ್ಲಿ ಉಗ್ರ
ಮುಖಂಡನ ಸೆರೆ?
ಲಂಚಕೋರ ಸಂಸದರ
ವಜಾ ಸರಿ: ಸುಪ್ರೀಂ ಕೋರ್ಟ್
|