|
ಇಮ್ರಾನ್ ಬಂಧನ: ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರು: ಸಿಸಿಬಿಯ ಡಿಸಿಪಿ ರವಿಕಾಂತೇಗೌಡ ನೇತೃತ್ವದಲ್ಲಿ
ಬೆಂಗಳೂರಿನಲ್ಲಿ ಶುಕ್ರವಾರ ಬಂಧಿಸಲ್ಪಟ್ಟ ಉಗ್ರವಾದಿ ಇಮ್ರಾನ್
ಅಲಿಯಾಸ್ ಬಿಲಾಲ್ ಅಹಮದ್ ಕೋಟ ಉರುಫ್ ಸಲೀಂನ್ನು
ಕರೆದುಕೊಂಡು ಶುಕ್ರವಾರ ಮಧ್ಯ ರಾತ್ರಿಯೇ ಹೊಸಪೇಟೆಯ
ಅವನ ನಿವಾಸಕ್ಕೆ ತೆರಳಿತ್ತು. ಅಲ್ಲಿ ಶೋಧಿಸಿ ಎರಡು ಎ.ಕೆ ೫೬
ರೈಫಲ್, ೫೬ ಮೆಗಜೈನ್ಗಳು, ಐದು ಕೈ ಬಾಂಬ್, ಕೆಲವು
ದಾಖಲೆಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್ ಆಯುಕ್ತ ನೀಲಂ
ಅಚ್ಚುತ್ ರಾವ್ ತಿಳಿಸಿದ್ದಾರೆ.
ಪೊಲೀಸರು ಇಮ್ರಾನ್ ಜೊತೆ ಸಂಬಂಧ ಹೊಂದಿರುವ ಹೊಸಪೇಟೆಯ
ಐದು ಕಾಶ್ಮೀರಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಉಗ್ರನ ಕುರಿತು ರಾಜ್ಯ ಪೊಲೀಸರು ವ್ಯಾಪಕ ಮಾಹಿತಿಯನ್ನು
ಕಲೆಹಾಕಿದ್ದಾರೆ. ಎಂಟು ವರ್ಷಗಳ ಹಿಂದೆಯೇ ಇಮ್ರಾನ್ ಅವನ
ಸೋದರ ಸಂಬಂಧಿಯೊಂದಿಗೆ ಹಂಪಿಗೆ ಬಂದು ಕರಕುಶಲ ಅಂಗಡಿ
ಪ್ರಾರಂಭಿಸಿದ್ದ.
ಹಂಪಿಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ವೈಶ್ಯಾವಾಟಿಕೆ, ಗಾಂಜಾ ಸಾಗಾಣಿಕೆ
ಹೀಗೆ ಮುಂತಾದ ಅಕ್ರಮ ಕೆಲಸಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ
ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು
ಸ್ಥಳೀಯರ ಆರೋಪವಾಗಿದೆ. ಈ ಬಗ್ಗೆ `ಹಂಪಿ ಉಳಿಸಿ' ಆಂದೋಲನ
ಪೊಲೀಸರ ಗಮನ ಸೆಳೆದಿತ್ತು.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|