|
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ ಉಗ್ರಗಾಮಿ
ಬೆಂಗಳೂರು: ಬೆಂಗಳೂರು ಸಿಬಿಐ ಪೊಲೀಸರು ಬೆಂಗಳೂರು
ಹೊರವಲಯದಲ್ಲಿ ಕಾಶ್ಮೀರ ಮೂಲದ ಲಷ್ಕರೆ ತೋಯ್ಬಾದ ಶಂಕಿತ
ಉಗ್ರನೊಬ್ಬನನ್ನು ಬಂಧಿಸಿದ್ದಾರೆ.
ಇಮ್ರಾನ್ ಅಲಿಯಾಸ್ ಬಿಲಾಲ್ ಎಂದು ಇವನ ಹೆಸರಾಗಿದ್ದು ಬಳ್ಳಾರಿಯ
ಹಂಪಿಯಲ್ಲಿ ಸಣ್ಣ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದೆ. ವಿಧಾನ
ಸೌಧ, ವಿಮಾನ ನಿಲ್ದಾಣಗಳಂತಹ ಪ್ರಮುಖ ಕಟ್ಟಡಗಳನ್ನು
ಸ್ಫೋಟಿಸಲು ಇವನು ಸಂಚು ರೂಪಿಸಿದ್ದ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.
ಬೆಂಗಳೂರಿನ ಹೊರವಲಯದಲ್ಲೇ ಈ ಉಗ್ರವಾದಿಯನ್ನು
ಬಂಧಿಸಲಾಗಿದೆ. ಅವನ ಬಳಿ ಇರುವ ಎಕೆ ೪೭, ಕೆಲವು ಸ್ಫೋಟಕಗಳು,
ಸೆಟಲೈಟ್ ಫೋನ್, ಬೆಂಗಳೂರಿನ ನಕ್ಷೆ ಮತ್ತು ಪ್ರಮುಖ
ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಹೊಸಪೇಟೆಯಿಂದ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ಸುಳಿವು ಪಡೆದ
ಪೊಲೀಸರು ಬೆಳಗಿನ ಜಾವದಿಂದಲೇ ಕಾದು ಕುಳಿತು
ಗುರುಗುಂಟೆಪಾಳ್ಯದ ಬಳಿ ಉಗ್ರವಾದಿಯನ್ನು ಬಂಧಿಸಲು
ಸಫಲರಾಗಿದ್ದಾರೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|