|
ಹೋಗು ಎನ್ನುವುದರಲ್ಲಿ ಹೊರ ಹೋದ ಜಮೀರ್
ಬೆಂಗಳೂರು: ಕುಮಾರಸ್ವಾಮಿಯವರ ಸಚಿವ ಸಂಪುಟದಲ್ಲಿ
ವಕ್ಫ್ ಸಚಿವರಾಗಿದ್ದ ಜಮೀರ್ ಅಹಮ್ಮದ್ ಖಾನ್ ಮಂಗಳವಾರ ತಮ್ಮ
ಸ್ಥಾನಕ್ಕೆ ರಾಜೀನಾಮೆಯನ್ನಿತ್ತಿದ್ದಾರೆ.
ರಾಜೀನಾಮೆಯನ್ನು ಸಲ್ಲಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ
ಜಮೀರ್ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ
ಕಿಡಿಕಾರಿದರು. `ಯಾವುದೇ ಪ್ರಮುಖ ಕಾರ್ಯಕ್ರಮಗಳು
ಇಲ್ಲದಿದ್ದರೂ ಮುಖ್ಯಮಂತ್ರಿಯವರು ಪ್ರಾರ್ಥನಾ ಸಭೆಗೆ
ಆಗಮಿಸಲಿಲ್ಲ. ಮುಸ್ಲಿಮ್ ಸಮುದಾಯಕ್ಕೆ ಗೌರವ ನೀಡದ
ಸಂಪುಟದಲ್ಲಿ ನನ್ನಿಂದ ಇರಲು ಸಾಧ್ಯವಾಗುತ್ತಿಲ್ಲ. ಇದು ಮುಸ್ಲಿಮರಿಗೆ
ಮಾಡಿದ ಅವಮಾನ. ಮುಸ್ಲಿಮರ ಕ್ಷಮೆ ಯಾಚಿಸಿದರೆ
ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವೆ' ಎಂದು ತಿಳಿಸಿದ್ದಾರೆ.
ಸೋಮವಾರ ನಡೆದ ಈದ್ ಪ್ರಾರ್ಥನಾ ಸಭೆಗೆ ಮುಖ್ಯಮಂತ್ರಿ
ಕುಮಾರಸ್ವಾಮಿ ಬರಲಿಲ್ಲ ಎನ್ನುವುದೇ ಜಮೀರ್ ಅಸಮಧಾನಕ್ಕೆ
ತಕ್ಷಣದ ಕಾರಣವಾಗಿದೆ. ಆದರೆ ಕುಮಾರಸ್ವಾಮಿ
ಮುಖ್ಯಮಂತ್ರಿಯಾದಗಿನಿಂದ ಸಣ್ಣದಾಗಿ ಜಮೀರ್ಲ್ಲಿ ಅಸಮಧಾನದ
ಹೊಗೆ ಆಡುತ್ತಲೇ ಇತ್ತು. ಗಣಿ ಹಗರಣದ ನಂತರ ಕಾಂಗ್ರೆಸ್
ನಾಯಕರು ಜೆಡಿಎಸ್ ಅತೃಪ್ತ ನಾಯಕರನ್ನು ಸೆಳೆಯಲು
ಪ್ರಯತ್ನಿಸುತ್ತಿದ್ದರು. ಆಗ ದಿನ ನಡೆಯುತ್ತಿದ್ದ ಅದರ ರಹಸ್ಯ
ಸಭೆಗೆ ಜಮೀರ್ ಹಾಜಾರಾಗುತ್ತಿದ್ದರು. ಅಲ್ಲಿ ರಾಜೀನಾಮೆಯನ್ನು
ನೀಡುವ ಬಗ್ಗೆ ಮಾತನಾಡುತ್ತಿದ್ದರು. ಈ ವಿಷಯ
ಕುಮಾರಸ್ವಾಮಿಯವರಿಗೂ ತಿಳಿದಿತ್ತು ಎನ್ನಲಾಗಿದೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|