|
ಕೆಪಿಎಸ್ಸಿ ನೇಮಕದಲ್ಲಿ ಅವ್ಯವಹಾರ: ಧರಣಿ
ಬೆಂಗಳೂರು: ಲೋಕಸೇವಾ ಆಯೋಗದ ಪರೀಕ್ಷೆ ಮತ್ತು
ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ತನಿಖೆಯನ್ನು
ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜ.೫ರಂದು ರಾಜ್ಯಾದ್ಯಂತ
ಧರಣಿ ನಡೆಸಲು ಅನೇಕ ಸಂಘಟನೆಗಳು ನಿರ್ಧರಿಸಿವೆ.
ಲೋಕಾಸೇವಾ ಆಯೋಗ ನಡೆಸಿದ ಕೆಎಎಸ್, ಎಸ್ಡಿಎ ಮತ್ತು ಎಫ್ಡಿಎ
ಪರೀಕ್ಷೆ ಹಾಗೂ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ.
ಆಯೋಗದ ಅಧ್ಯಕ್ಷ ಡಾ. ಎಚ್.ಎನ್ ಕೃಷ್ಣ ಸ್ವಜನ ಪಕ್ಷಪಾತ
ನಡೆಸಿದ್ದಾರೆ ಎಂದು ಕರ್ನಾಟಕ ಹಿಂದುಳಿದ ಜಾಗೃತ ವೇದಿಕೆ, ರಾಜ್ಯ
ದಲಿತ ಸಂಘರ್ಷ ಸಮಿತಿ, ಕೆಎಎಸ್ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ,
ಬ್ರಾಹ್ಮಣರ ವೇದಿಕೆ ಮತ್ತು ಮುಸ್ಲಿಮ್ ಒಕ್ಕೂಟ ಮಂಗಳವಾರ
ಜಂಟಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿವೆ.
`೧೯೯೮ರಿಂದ ೨೦೦೪ವರೆಗೆ ನಡೆದ ನೇಮಕ ಮತ್ತು ಪರೀಕ್ಷೆ
ಪ್ರಕ್ರಿಯೆಯಲ್ಲಿ ಅಧ್ಯಕ್ಷ ಕೃಷ್ಣಾ ಪ್ರಮುಖ ಹುದ್ದೆಗಳನ್ನು
ತಮ್ಮ ಆಪ್ತ ವಲಯಕ್ಕೆ ಹಂಚಿ ಅಕ್ರಮ ನಡೆಸಿದ್ದಾರೆ ಎನ್ನುವುದಕ್ಕೆ
ಸಾಕ್ಷಿ ಇದೆ' ಎಂದು ಒಕ್ಕೂಟದ ಅಧ್ಯಕ್ಷ ಕೆ.ಎಸ್.ಶಿವರಾಮ
ಆರೊಪಿಸಿದ್ದಾರೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|